ಮನೆ ಅಪರಾಧ ಶಾಪಿಂಗ್ ಮಾಡಲು ವಕೀಲರ ಬಳಿ ಹಣ ಕೇಳಿದ ಅಪರಿಚಿತ ಜೋಡಿ: ಪ್ರಶ್ನಿಸಿದ್ದಕ್ಕೆ ರಾಡ್ ನಿಂದ ಹಲ್ಲೆ

ಶಾಪಿಂಗ್ ಮಾಡಲು ವಕೀಲರ ಬಳಿ ಹಣ ಕೇಳಿದ ಅಪರಿಚಿತ ಜೋಡಿ: ಪ್ರಶ್ನಿಸಿದ್ದಕ್ಕೆ ರಾಡ್ ನಿಂದ ಹಲ್ಲೆ

0

ಬೆಂಗಳೂರು : ಬೆಂಗಳೂರಿನ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ವಕೀಲರೊಬ್ಬರ ಮೇಲೆ ಯುವಕ, ಯುವತಿ ಹಲ್ಲೆ ಮಾಡಿರುವ ಆಂತರಿಕ ಘಟನೆ ಮಂಗಳವಾರ (ಜು.11) ರಾತ್ರಿ ನಡೆದಿದೆ.                    

Join Our Whatsapp Group

ವಕೀಲ ಚಂದ್ರು ಎಂಬುವವರ ಮೇಲೆ ನಿಕಿತಾ ಮತ್ತು ಹರೀಶ್ ಎಂಬುವರು ಹಲ್ಲೆ ಮಾಡಿದವರು.

ರಾತ್ರಿ ಚಂದ್ರು ಅವರು ಒರಿಯನ್ ಮಾಲ್ ನ ಮುಂಭಾಗ ಬೈಕ್ ನಲ್ಲಿ ಬರುತ್ತಿದ್ದರು. ಈ ವೇಳೆ ಆರೋಪಿಗಳಿಬ್ಬರು ಬೈಕ್ ನಲ್ಲಿ ಬಂದು ಚಂದ್ರು ಅವರ ಬೈಕ್ ಮುಂದೆ ತಮ್ಮ ಬೈಕ್ ನಿಲ್ಲಿಸಿದ್ದಾರೆ. ಬಳಿಕ 1 ಲಕ್ಷ ರೂ.ಹಣ ಕೊಡಿ ಶಾಪಿಂಗ್ ಮಾಡಬೇಕು ಎಂದು ಕೇಳಿದ್ದಾರೆ.       

ವಕೀಲರಿಗೆ ಇಬ್ಬರು ಯಾವುದೇ ಪರಿಚಯವಿಲ್ಲ. ಅಲ್ಲದೆ ಒಂದು ಲಕ್ಷ ಹಣ ಕೇಳಿದ್ದನ್ನು ನೋಡಿ ಆಘಾತಕ್ಕೆ ಒಳಗಾದ ಚಂದ್ರು, ತಕ್ಷಣ ಇಬ್ಬರನ್ನು ಪ್ರಶ್ನೆ ಮಾಡಿದ್ದಾರೆ ಈ ವೇಳೆ ಆ ಜೋಡಿ ಚಂದ್ರು ಅವರ ಮೇಲೆಯೇ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ಚಂದ್ರು ತಲೆಯ ಭಾಗಕ್ಕೆ ಬಲವಾದ ಏಟು ಬಿದ್ದಿದ್ದು, ಆ ಬಳಿಕ ಅವರು ಪೊಲೀಸರ ಸಹಾಯ ಪಡೆದುಕೊಂಡರು.          

ಪೊಲೀಸರು ನಿಖಿತಾ ಮತ್ತು ಹರಿಶ್ಚಂದ್ರ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ ನಂತರ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಎನ್ ಸಿಆರ್ ದಾಖಲಾಗಿದೆ.