ಮನೆ ಅಪರಾಧ ತಂದೆ ಮತ್ತು ಅಣ್ಣನಿಂದ ಕುಡಿಯಲು ಹಣ ಕೊಡುವಂತೆ ಪೀಡಿಸುತ್ತಿದ್ದ ಯುವಕನ ಕೊಲೆ

ತಂದೆ ಮತ್ತು ಅಣ್ಣನಿಂದ ಕುಡಿಯಲು ಹಣ ಕೊಡುವಂತೆ ಪೀಡಿಸುತ್ತಿದ್ದ ಯುವಕನ ಕೊಲೆ

0

ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದಲ್ಲಿ ಕುಡಿತದ ಚಟಕ್ಕೆ ದಾಸನಾಗಿ ಕುಟುಂಬಸ್ಥರನ್ನು ಕಾಡಿಸುತ್ತಿದ್ದ ಯುವಕನನ್ನು ಸ್ವಂತ ತಂದೆ ಮತ್ತು ಅಣ್ಣನೇ ಹೊಡೆದು ಸಾಯಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.     

Join Our Whatsapp Group

ಹಿಡಕಲ್ಲು ಗ್ರಾಮದ ಸೋಮಯ್ಯ ಮಹಾಲಿಂಗಯ್ಯ ಹಿರೇಮಠ (24) ಮೃತ ದುರ್ದೈವಿ.

ಮಹಾಲಿಂಗಯ್ಯ ಗುರುಸಿದ್ದಯ್ಯ ಹಿರೇಮಠ, ಬಸಯ್ಯ ಹಿರೇಮಠ, ಎಂಬುವವರು ಈ ಕೃತ್ಯಎಸಗಿದ್ದಾರೆ. ಆರೋಪಿಗಳು ಪೊಲೀಸರು ವಶಕ್ಕೆ ಪಡೆದಿದ್ದಾರೆ.         

ಘಟನೆಯ ಹಿನ್ನೆಲೆ : ಪ್ರತಿನಿತ್ಯ ಕುಡಿದು ಬಂದು ರಾತ್ರಿಯಿಡೀ ಮನೆಯಲ್ಲಿ ಜಗಳ ಮಾಡುತ್ತಿದ್ದ ಸೋಮಯ್ಯ ವರ್ತನೆಯಿಂದ ಮನೆಯವರು ನೊಂದಿದ್ದರು. ಅಂತೆಯೇ ಜುಲೈ 10ರಂದು ಸೋಮಯ್ಯ ಕುಡಿಯಲು ಹಣ ಕೊಡಿ ಎಂದು ಕುಟುಂಬಸ್ಥರನ್ನು ಕೇಳಿದ್ದಾನೆ.                      

ಈ ವೇಳೆ ಆತನ ಉಪಟಳ ತಾಳಲಾರದೆ ತಲೆಗೆ ತಂದೆ ಮಹಾಲಿಂಗಯ್ಯ ಹೊಡೆದಿದ್ದಾರೆ. ಹೊಡೆತ ತಿಂದ ಸೋಮಯ್ಯ ಸಾವನ್ನಪ್ಪಿದ್ದು ಮೃತ ಯುವಕನ ಅಂತ್ಯಕ್ರಿಯೆ ಮಾಡಲಾಗಿದೆ.                   

ಆ ಬಳಿಕ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮೃತ ಯುವಕನ ತಂದೆ ಹಾಗೂ ಸಹೋದರನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

 ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.