ಮನೆ ರಾಜ್ಯ ಅಖಿಲೇಶ್ ಮೈತ್ರಿ ಮುರಿದು ಬಿಜೆಪಿ ಜೊತೆ ಸೇರಿದ ಒಪ್ಪಿ ರಾಜ್’ ಭರ್: ರಾಜ್ ಭಾರ್ ಜಿ...

ಅಖಿಲೇಶ್ ಮೈತ್ರಿ ಮುರಿದು ಬಿಜೆಪಿ ಜೊತೆ ಸೇರಿದ ಒಪ್ಪಿ ರಾಜ್’ ಭರ್: ರಾಜ್ ಭಾರ್ ಜಿ ಅವರ ಆಗಮನವು  ಉತ್ತರ ಪ್ರದೇಶದಲ್ಲಿ ಎನ್​ಡಿಎಯನ್ನು ಬಲಪಡಿಸುತ್ತದೆ

0

 ಹೊಸದಿಲ್ಲಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದ ಜೊತೆ ಗುರುತಿಸಿಕೊಂಡಿದ್ದ ಸುಹೇಲ್ದೆವ್  ಭಾರತೀಯ ಸಮಾಜ ಪಕ್ಷವು ಇದೀಗ ಬಿಜೆಪಿ ನೇತೃತ್ವದ ಎನ್.ಡಿ.ಎ ಬಳಗ ಸೇರಿಕೊಂಡಿದೆ.

Join Our Whatsapp Group

 ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷದ (ಎಸ್.ಬಿ.ಎಸ್.ಪಿ) ಅಧ್ಯಕ್ಷ ಓಂ ಪ್ರಕಾಶ್ ರಾಜ್ ಭರ್ ಅವರು ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಚಿತ್ರವನ್ನು ಟ್ವಿಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಯು.ಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿ ಮುಖ್ಯಸ್ಥ ಜೆ.ಪಿ ನಡ್ದಾ ಅವರಿಗೆ ಧನ್ಯವಾದಗಳು ಹೇಳಿದ್ದಾರೆ.

 “ಬಿಜೆಪಿ ಮತ್ತು ಎಸ್.ಬಿ.ಎಸ್.ಪಿ ಸಾಮಾಜಿಕ ನ್ಯಾಯ, ದೇಶದ ಭದ್ರತೆ ಮತ್ತು ಉತ್ತಮ ಆಡಳಿತದಿಂದ ವಂಚಿತರಾದವರು, ದಮನಿತರು, ಹಿಂದುಳಿದ ವರ್ಗಗಳು, ದಲಿತರು, ಮಹಿಳೆಯರು, ರೈತರು, ಯುವಕರು ಮತ್ತು ಸಮಾಜದ ಎಲ್ಲಾ ದುರ್ಬಲ ವರ್ಗಗಳ ಸಬಲೀಕರಣಕ್ಕಾಗಿ ಹೋರಾಡುತ್ತೇವೆ” ಎಂದು ಅವರು ಹೇಳಿದರು.

” ರಾಜ್ ಭಾರ್ ಜಿ ಅವರ ಆಗಮನವು  ಉತ್ತರ ಪ್ರದೇಶದಲ್ಲಿ ಎನ್​ಡಿಎಯನ್ನು ಬಲಪಡಿಸುತ್ತದೆ” ಎಂದು ರಾಜಭರ್ ಅವರೊಂದಿಗಿನ ಮಾತುಕತೆಯ ನಂತರ ಅಮಿತ್ ಶಾ ಹೇಳಿದರು.

 ವಿಶೇಷವಾಗಿ ಪೂರ್ವ, ಉತ್ತರ ಪ್ರದೇಶದಲ್ಲಿ ಗಣನೀಯ ಸಂಖ್ಯೆಯಲ್ಲಿ ಇರುವ ಅವರ ರಾಜಭರ್ ಸಮುದಾಯದಲ್ಲಿ ಪ್ರಭಾವವನ್ನು ಹೊಂದಿರುವ ರಾಜಭರ್ ಜುಲೈ 18ರಂದು ಎನ್.ಡಿ.ಎ ಸಭೆಯಲ್ಲಿ ಭಾಗವಹಿಸಲಿದ್ದಾರೆ.

 ಎಸ್.ಬಿ.ಎಸ್.ಪಿ 2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತ್ತು. ಓಂ ಪ್ರಕಾಶ್ ರಾಜ್ ಭಾರ್ ಅವರು ಯೋಗಿ ಆದಿತ್ಯನಾಥ ನೇತೃತ್ವದ ಕ್ಯಾಬಿನೆಟ್ ನಲ್ಲಿ 2019 ರವರೆಗೆ “ಮೈತ್ರಿ ವಿರೋಧಿ ಚಟುವಟಿಕೆಗಳಿಗಾಗಿ” ವಜಾ ಗೊಳಿಸುವವರೆಗೂ ಸಚಿವರಾಗಿ ಸೇವಿ ಸಲ್ಲಿಸಿದರು.

 ಎಸ್.ಬಿ.ಎಸ್.ಪಿ ನಂತರ 2022ರ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತ್ತು. 2022ರ ರಾಜ್ಯ ಚುನಾವಣೆಯ ಸಮಯದಲ್ಲಿ ‘ಪೂರ್ವಂಚಲ್’ ಭಾಗಗಳಲ್ಲಿ ಬಿಜೆಪಿಯ ತುಲನಾತ್ಮಕವಾಗಿ ಮಂದವಾದ ಪ್ರದರ್ಶನಕ್ಕೆ ಅಖಿಲೇಶ್ ಯಾದವ್ ಪಕ್ಷದೊಂದಿಗಿನ ರಾಜ್ ಭರ್ ಅವರ ಮೈತ್ರಿ ಒಂದು ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ. ಆದರೆ ಕಳೆದ ವರ್ಷ ಜುಲೈನಲ್ಲಿ ಓಂ ಪ್ರಕಾಶ್ ರಾಜ್ ಭರ್ ಎಸ್.ಪಿ ಜೊತೆಗಿನ ಮೈತ್ರಿಯನ್ನು ಕೊನೆಗೊಳಿಸಿದ್ದರು