ಯೆಯೊಸು (ಕೊರಿಯಾ) : ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರರಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಭಾನುವಾರದಂದು ಕೊರಿಯಾ ಓಪನ್ ಪುರುಷರ ಡಬಲ್ಸ್ ಫೈನಲ್ನಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಅಗ್ರ ಶ್ರೇಯಾಂಕದಲ್ಲಿರುವ ಇಂಡೋನೇಷ್ಯಾದ ಫಜರ್ ಅಲ್ಫಿಯಾನ್ ಮತ್ತು ಮುಹಮದ್ ರಿಯಾನ್ ಅರ್ಡಿಯಾಂಟೊ ಅವರನ್ನು 17-21, 21-13, 21-14 ಗೇಮ್ ಗಳ ಅಂತರದಿಂದ ಸಾತ್ವಿಕ್-ಚಿರಾಗ್ ಜೋಡಿ ಸೋಲಿಸಿತು.
ಈ ಭರ್ಜರಿ ಗೆಲುವು ಸಾಧಿಸುವ ಮೂಲಕ ತಮ್ಮ ಯಶಸ್ವಿ ಗೆಲುವಿನ ಓಟವನ್ನು ಮುಂದುವರೆಸಿದ್ದಾರೆ.2022 ರ ಕಾಮನ್ವೆಲ್ತ್ ಕ್ರೀಡಾಕೂಟದ ಚಾಂಪಿಯನ್ಗಳಾದ ಸಾತ್ವಿಕ್ ಮತ್ತು ಚಿರಾಗ್, ಈ ವರ್ಷ ಫ್ರೆಂಚ್ ಓಪನ್, ಏಷ್ಯನ್ ಚಾಂಪಿಯನ್ಶಿಪ್ ಮತ್ತು ಇಂಡೋನೇಷ್ಯಾ ಓಪನ್ನಲ್ಲಿ ಚಾಂಪಿಯನ್ ಆದ ಈ ಜೋಡಿ ಮತ್ತೊಂದು ಗೆಲುವಿನ ಗರಿಯನ್ನು ತಮ್ಮ ಖಾತೆಗೆ ಸೇರಿಸಿದ್ದಾರೆ.
ಭಾರತದ ಈ ಜೋಡಿಯು ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ವಿಜೇತರಾದ ಅಲ್ಫಿಯಾನ್ ಮತ್ತು ಅರ್ಡಿಯಾಂಟೊ ವಿರುದ್ಧ ಉತ್ತಮ ಆಟ ಪ್ರದರ್ಶನ ತೋರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.ಆರಂಭಿಕ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿದ ಸಾತ್ವಿಕ್-ಚಿರಾಗ್ ಆರಂಭದಲ್ಲಿ ಸ್ವಲ್ಪ ನಿರಾಳವಾಗಿ ಕಂಡರು. ಆದರೆ ಕೊನೆಯಲ್ಲಿ ಚೇತರಿಸಿಕೊಂಡ ಈ ಜೊಡಿ 6 ಅಂಕಗಳಗಳನ್ನು ಗಳಿಸುವ ಮೂಲಕ 10-19 ಹಿನ್ನಡೆಯನ್ನು ಕಡಿಮೆ ಮಾಡಿದರು.
ಆದಾಗ್ಯೂ, ಸಾತ್ವಿಕ್-ಚಿರಾಗ್ ಎರಡನೇ ಗೇಮ್ನಲ್ಲಿ ಆವೇಗವನ್ನು ಕಂಡುಕೊಂಡು ಅಲ್ಫಿಯಾನ್ ಮತ್ತು ಅರ್ಡಿಯಾಂಟೊ ವಿರುದ್ದ ಪ್ರಾಬಲ್ಯ ಸಾಧಿಸಿದರು. ಆದರೇ ಇಂಡೋನೇಷ್ಯಾದ ಆಟಗಾರರು ಹೆಚ್ಚಿನ ವೇಗದಲ್ಲಿ ಫ್ಲಾಟ್ ರ್ಯಾಲಿಗಳನ್ನು ಆಡಿ ಮೊದಲ ಗೇಮ್ 17-21 ಪಾಯಿಂಟ್ ದಾಖಲಿಸಿದರು.
ಬಳಿಕ ಎರಡನೇ ಗೇಮ್ನಲ್ಲಿ ಪುಟಿದೆದ್ದ ಸಾತ್ವಿಕ್-ಚಿರಾಗ್ ಜೋಡಿ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾಗಿ 6-4 ಅಂಕಗಳಿಂದ ಮುನ್ನಡೆ ಸಾಧಿಸಿದರು. ಇದೇ ರೀತಿ ಆಟವಾಡಿ ಸಾತ್ವಿಕ್-ಚಿರಾಗ್ 10-8ರ ವರೆಗೆ ಗೇಮ್ಅನ್ನು ತಂದರು. ಈ ವೇಳೆ ಸಾತ್ವಿಕ್ ಅವರ ಟ್ರೇಡ್ಮಾರ್ಕ್ ಸ್ಮ್ಯಾಶ್ ಗಮನ ಸೆಳೆದರು. ವಿರಾಮದ ವೇಳೆಗೆ ಭಾರತದ ಜೋಡಿ ಮೂರು ಪಾಯಿಂಟ್ಗಳನ್ನು ಪುನಃ ಪಡೆದುಕೊಂಡು 17-11ಕ್ಕೆ ಗೇಮ್ ಕರೆದೊಯ್ದಿತು.
ಅಂತಿಮವಾಗಿ 21-13 ಗೇಮ್ ಗಳ ಅಂತರದಲ್ಲಿ ಪಂದ್ಯವನ್ನು ಸಮಬಲ ಮಾಡಿಕೊಂಡು ಮೂರನೇ ಪಂದ್ಯವಾಡಲು ಸಿದ್ಧರಾದರು.ಇನ್ನು ಮೂರನೇ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ ಸಾತ್ವಿಕ್ ಮತ್ತು ಚಿರಾಗ್ ಮೊದಲು 9-6 ಮುನ್ನಡೆ ಸಾಧಿಸಿದರು. ಸಾತ್ವಿಕ್ ಮತ್ತು ಚಿರಾಗ್ ಹೆಚ್ಚು ಆಕ್ರಮಣಕಾರಿ ಆಟವಾಡಿ ವಿಶ್ವದ ನಂಬರ್ 1 ಜೋಡಿಯನ್ನು ಪಂಪ್ ಅಡಿಯಲ್ಲಿ ಇರಿಸುವಲ್ಲಿ ಯಶಸ್ವಿಯಾದರು.
ಪುನಾರಂಭದ ನಂತರ, ಭಾರತದ ಈ ಜೋಡಿ ಮೂರು ಪಾಯಿಂಟ್ ಮುನ್ನಡೆಯನ್ನು 13-10 ರಲ್ಲಿ ಇರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಅಲ್ಫಿಯಾನ್ ಮತ್ತು ಅರ್ಡಿಯಾಂಟೊ ಅವರು ತಮ್ಮ ಆಟದಲ್ಲಿ ಸಂಪೂರ್ಣ ಹಿಡಿತ ಕಳೆದುಕೊಂಡು 18-12 ಹಿನ್ನಡೆ ಅನುಭವಿಸಿದರು. ಮತ್ತೊಂದೆಡೆ ಸಾತ್ವಿಕ್ ಮತ್ತು ಚಿರಾಗ್ ಸತತ ಅಂಕಗಳನ್ನು ದಾಖಲಿಸುವ ಮೂಲಕ ತಮ್ಮ ವಿಜಯ ಪತಾಕೆ ಹಾರಿಸಿದರು.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.