ಮನೆ ರಾಜ್ಯ ಮಂಡ್ಯ: ವರ ಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಚಾಮುಂಡೇಶ್ವರಿ ದೇವಿಗೆ ಧನಲಕ್ಷ್ಮಿ ಅಲಂಕಾರ

ಮಂಡ್ಯ: ವರ ಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಚಾಮುಂಡೇಶ್ವರಿ ದೇವಿಗೆ ಧನಲಕ್ಷ್ಮಿ ಅಲಂಕಾರ

0

ಮಂಡ್ಯ: ವರ ಮಹಾಲಕ್ಷ್ಮಿಹಬ್ಬ ಹಿನ್ನಲೆ ಸಕ್ಕರೆನಾಡು ಮಂಡ್ಯದ ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇಗುಲದಲ್ಲಿ 500, 200, 100, 50, 20 ಹಾಗೂ10 ರೂ ನ ಹೊಸ ನೋಟುಗಳಿಂದ ವಿಶೇಷವಾಗಿ ಧನಲಕ್ಷ್ಮಿ ಅಲಂಕಾರ ಮಾಡಲಾಗಿದೆ.

ಭಕ್ತರಿಂದ ಸಂಗ್ರಹಿಸಿದ 3 ಲಕ್ಷ ರೂ ಮೌಲ್ಯದ ನೋಟುಗಳಿಂದ ದೇವಿಯನ್ನು ಅಲಂಕರಿಸಲಾಗಿದ್ದು, ವಿಶೇಷ ಧನಲಕ್ಷ್ಮಿ ಅಲಂಕಾರದಲ್ಲಿ ಚಾಮುಂಡೇಶ್ವರಿ ದೇವಿ ಕಂಗೊಳಿಸುತ್ತಿದ್ದಾಳೆ.

ಗರ್ಭಗುಡಿ ಅರ್ಚಕ ಲಕ್ಷ್ಮೀಶ ಅವರು, ಪ್ರತಿ ವರ್ಷ ದೇವಿಗೆ ನೋಟುಗಳಿಂದ ಧನಲಕ್ಷ್ಮಿ ಅಲಂಕಾರ ಮಾಡುತ್ತಿದ್ದಾರೆ.

ಧನಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ದೇವಿ ದರ್ಶನಕ್ಕೆ ಭಕ್ತರು ಆಗಮಿಸುತ್ತಿದ್ದಾರೆ.