ಮನೆ ಅಪರಾಧ ಯಾದಗಿರಿ: ಹಾಲಿಗೆ ವಿಷ ಬೆರೆಸಿ ಐದು ತಿಂಗಳ ಹಸುಗೂಸನ್ನು ಕೊಂದ ಮಲತಾಯಿ

ಯಾದಗಿರಿ: ಹಾಲಿಗೆ ವಿಷ ಬೆರೆಸಿ ಐದು ತಿಂಗಳ ಹಸುಗೂಸನ್ನು ಕೊಂದ ಮಲತಾಯಿ

0

ಯಾದಗಿರಿ: ಆಸ್ತಿಗಾಗಿ ಹಾಲಿಗೆ ವಿಷ ಬೆರೆಸಿ ಐದು ತಿಂಗಳ ಹಸುಗೂಸನ್ನು ಮಲತಾಯಿ ಕೊಂದ ಘಟನೆ ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಬಬಲಾದ ಗ್ರಾಮದಲ್ಲಿ ನಡೆದಿದೆ.

ದೇವಮ್ಮ ಚೆಟ್ಟಿಗೇರಿ ಎಂಬ ಮಲತಾಯಿ ಹಸುಗೂಸಿಗೆ ಹಾಲಿನಲ್ಲಿ ವಿಷ ಬೆರೆಸಿ ಸಾಯಿಸಿರುವ ಆರೋಪಿ. ಸಂಗೀತಾ ಚೆಟ್ಟಿಗೇರಿ, ಸಾವನ್ನಪ್ಪಿದ ಐದು ತಿಂಗಳ ಹಸುಗೂಸು.

ಮೃತ ಹಸುಗೂಸು ಸಂಗೀತಾಳ ತಾಯಿ ಶ್ರೀದೇವಿ ಎಂಬಾಕೆ ಹಾಲು ಕುಡಿಸುತ್ತಿದ್ದಾಗ ಒತ್ತಾಯ ಮಾಡಿ, ತಾನೇ ಹಾಲುಣಿಸುತ್ತೇನೆ ಅಂತಾ ದೇವಮ್ಮ ದುಂಬಾಲು ಬಿದ್ದು ಕರೆದೊಯ್ದಿದ್ದಳು.

ಬಳಿಕ ದೇವಮ್ಮ ಮನೆಯ ರೂಮಿಗೆ ಕರೆದುಕೊಂಡು ಹೋಗಿ ಡೋರ್ ಮುಚ್ಚಿ ಹಾಲಿನ ಬಾಟಲ್ ನಲ್ಲಿ ವಿಷ ಬೆರೆಸಿ ಕೂಸಿಗೆ ಕೂಡಿಸಿದ್ದಾಳೆ. ವಿಷಬೆರೆತ ಹಾಲು ಕುಡಿದ ಮೂರು ಗಂಟೆ ನಂತರ ಬಾಯಲ್ಲಿ ನೊರೆ ಬಂದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಹಸುಗೂಸು ಸಂಗೀತಾ ಸಾವನ್ನಪ್ಪಿದೆ.

ವಡಗೇರ ಪೊಲೀಸರು ಆರೋಪಿ ದೇವಮ್ಮಳನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.