ಮನೆ ಅಪರಾಧ ಪತ್ನಿಯ ಹತ್ಯೆಗೈದ ಪತಿಯ ಬಂಧನ

ಪತ್ನಿಯ ಹತ್ಯೆಗೈದ ಪತಿಯ ಬಂಧನ

0

ಬೆಂಗಳೂರು(Bengaluru): ಪತ್ನಿಯ ಹತ್ಯೆಗೈದು ಪರಾರಿಯಾಗಿದ್ದ ಪತಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಗರದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವನಜಾಕ್ಷಿ (31) ಮೃತ ಮಹಿಳೆಯಾಗಿದ್ದು, ಅಶೋಕ (37) ಆರೋಪಿ ಪತಿಯಾಗಿದ್ದಾನೆ. ಏಪ್ರಿಲ್ 17ರಂದು ರಾತ್ರಿ ಕೊಲೆ ನಡೆದಿದ್ದು, ಕೊಳೆತ ಸ್ಥಿತಿಯಲ್ಲಿ‌ ಮೃತದೇಹ ಗುರುವಾರ ಪತ್ತೆ ಆಗಿದೆ ಎಂದು ಪೊಲೀಸರು ತಿಳಿಸಿದರು.

ಕಾರು ಚಾಲಕ‌ನಾಗಿ‌ ಕೆಲಸ‌ ಮಾಡುತ್ತಿದ್ದ ಅಶೋಕ, ಕೆಲ ವರ್ಷಗಳ ಹಿಂದೆ ವನಜಾಕ್ಷಿ ಅವರನ್ನು ಮದುವೆಯಾಗಿದ್ದ. ಕಾವೇರಿಪುರದಲ್ಲಿ ದಂಪತಿ ನೆಲೆಸಿದ್ದರು.

ಕೌಟುಂಬಿಕ ಕಾರಣಕ್ಕಾಗಿ ದಂಪತಿ‌ ನಡುವೆ ಆಗಾಗ ಜಗಳ‌ ಆಗುತ್ತಿತ್ತು. ಏಪ್ರಿಲ್ 17ರಂದು ಜಗಳ‌ ವಿಕೋಪಕ್ಕೆ ಹೋದ ಪರಿಣಾಮ ಪತ್ನಿಯನ್ನು ‌ಕೊಂದಿದ್ದ ಅಶೋಕ, ಮನೆಯೊಳಗೆ ಮೃತದೇಹವಿಟ್ಟು ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದ. ಮನೆಯಿಂದ ದುರ್ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು.

ಮನೆಗೆ ಹೋಗಿ ಪರಿಶೀಲಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದೂ ಪೊಲೀಸರು ಹೇಳಿದರು.