ಮನೆ ಸುದ್ದಿ ಜಾಲ ಹೆಜ್ಜೇನು ದಾಳಿ ದನಗಾಹಿ ಸಾವು  

ಹೆಜ್ಜೇನು ದಾಳಿ ದನಗಾಹಿ ಸಾವು  

0

ಕೊಳ್ಳೇಗಾಲ : ಹೆಜ್ಜೇನು ದಾಳಿಗೆ ಸಿಲುಕಿ ದನಗಾಹಿಯೊಬ್ಬರು ಸಾವನ್ನೊಪ್ಪಿರುವ ಘಟನೆ ತಾಲೂಕಿನ ಕೆಂಪನಪಾಳ್ಯ ಗ್ರಾಮದ ಹೊರವಲಯದಲ್ಲಿ ನಡೆದಿದೆ. 

Join Our Whatsapp Group

ಕೆಂಪನಪಾಳ್ಯ ಗ್ರಾಮದ ಮಾದೇವ (60) ಮೃತಪಟ್ಟವರು. ಇವರು, ಗ್ರಾಮದ ಹೊರ ವಲಯದ ಕಾಡಂಚಿನಲ್ಲಿ ದನ, ಕುರಿಗಳನ್ನು ಮೇಯಿಸುತ್ತಿದ್ದ ವೇಳೆ ಹೆಜ್ಜೇನು ನೋಣಗಳು ಇವರ ಮುಖ, ಮೈಕೈಗೆ ಕಚ್ಚಿದ ಪರಿಣಾಮ ತೀವ್ರವಾಗಿ ಗಾಯಗೊಂಡರು. ತಕ್ಷಣ ಅವರನ್ನು ಜಾನುವಾರು ಮಾಲೀಕರು ಕೊಳ್ಳೇಗಾಲ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.