ಉತ್ಕಟ – ಬಲವತ್ತಾರವಾದುದು, ಭಯಂಕರವಾದದು, ಏರುಪೇರುಗಳಿಂದ ಕೂಡಿ ಸಮಾನಾಗಿಲ್ಲದಿರುವುದು ಎಂದರ್ಥ. ಈ ಆಸನದ ನಿಲುವು ಕಲ್ಪನಾ (ಊಹಾ) ಪೀಠದಲ್ಲಿ ಕುಳಿತಂತೆ ತೋರುವುದು.
ಅಭ್ಯಾಸ ಕ್ರಮ :-
೧. ಮೊದಲು ತಡಾಸನದಲ್ಲಿ ನಿಲ್ಲಬೇಕು. ತೋಳುಗಳನ್ನು ತಲೆಯ ಮೇಲೆ ನೇರವಾಗಿ ಎತ್ತಿ ಹಿಡಿದು, ಅಂಗೈಗಳೆರಡನ್ನು ಜೋಡಿಸಿಡಬೇಕು.
೨. ಉಸಿರನ್ನು ಹೊರಕ್ಕೆ ಬಿಟ್ಟು ಮಂಡಿಗಳನ್ನ ಭಾಗಿಸಿ ಮುಂಡಬಾಗವನ್ನು ಭಾಗಿಸಿ, ತೊಡೆಗಳೆರಡನ್ನು ನೆಲಕ್ಕೆ ಸಮಾನಾಂತರವಾಗಿರಬೇಕು.
೩. ಮುಂದೆ ಭಾಗದೆ, ಎದೆಭಾಗವನ್ನು ಆದಷ್ಟು ಹಿಂದಕ್ಕಿರಿಸಿ ಸಾಮಾನ್ಯವಾಗಿ ಉಸಿರಾಡುತ್ತಿರಬೇಕು.
೪. ಈ ಭಂಗಿಯಲ್ಲಿ ಸುಮಾರು 30 ಸೆಕೆಂಡುಗಳ ಕಾಲ ನೆಲೆಸಬೇಕು. ಈ ಸ್ಥಿತಿಯಲ್ಲಿ ಸಮತೋಲನ ಮಾಡುವುದು ಕಷ್ಟ ಸಾಧ್ಯ.
೫. ಕೊನೆಗೆ ಉಸಿರನ್ನು ಒಳಕ್ಕೆಳೆದು, ಕಾಲುಗಳನ್ನು ನೇರ ಮಾಡಿ, ನಿಲ್ಲಿಸಿ, ತೋಳುಗಳನ್ನು ಕೆಳಗಿಳಿಸಿ, ಮತ್ತೆ ತಡಾಸನದಲ್ಲಿ ನಿಂತು ವಿಶ್ರಮಿಸಿಕೊಳ್ಳಬೇಕು.
ಪರಿಣಾಮಗಳು :-
ಈ ಆಸನವು ಭುಜಗಳಲ್ಲಿ ಪೆಡಸುತನವನ್ನು ದೂಡಿ, ಕಾಲುಗಳಲ್ಲಿರುವ ಸಾಮಾನ್ಯ ನ್ಯೂನತೆಗಳನ್ನು ಸರಿಪಡಿಸಲು ಸಹಕಾರಿಯಾಗಿದೆ. ಅಲ್ಲದೆ ಕಾಲಹರಡು (ಗಿಣ್ಣು)ಗಳು ಈ ಆಸನಭ್ಯಾಸದಿಂದ ಬಲಗೊಂಡು, ಕಾಲಿನ ಮಾಂಸಖಂಡಗಳು ಸರಿಯಾದ ರೀತಿಯಲ್ಲಿ ಬೆಳೆಯುತ್ತದೆ. ಎದೆಯ ಭಾಗದಲ್ಲಿ ವಫೆಯೆಂಬ ಪೊರೆಯೂ ಮೇಲಕ್ಕುಬಿ ಎದೆಗೆ ಮೃದುವಾದ ಅಂಗಮರ್ದನದ ಸೌಲಭ್ಯ ಇದರಿಂದ ದೊರಕುತ್ತದೆ. ಇದರ ಜೊತೆಗೆ ಕಿಬ್ಬೊಟ್ಟೆಯಲ್ಲಡಕವಾಗಿರುವ ಅಂಗಗಳೂ ಮತ್ತು ಬೆನ್ನೂ ಹುರುಪುಗೊಳ್ಳುವವು ಹಾಗೂ ಎದೆಯ ಭಾಗವು ವಿಶಾಲವಾಗುವುದು. ಈ ಕಾರಣಗಳಿಂದ ಈ ಆಸನಾಭ್ಯಾಸವು ಕುದುರೆ ಸವಾರರಿಗೆ ಹೆಚ್ಚು ಉಪಯೋಗಿ.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.