ಮನೆ ರಾಜಕೀಯ ಪಿಎಸ್ಐ ಪರೀಕ್ಷಾ ಅಕ್ರಮ: ಯಾರನ್ನೂ ರಕ್ಷಿಸುವುದಿಲ್ಲ: ಡಾ.ಕೆ.ಸುಧಾಕರ್

ಪಿಎಸ್ಐ ಪರೀಕ್ಷಾ ಅಕ್ರಮ: ಯಾರನ್ನೂ ರಕ್ಷಿಸುವುದಿಲ್ಲ: ಡಾ.ಕೆ.ಸುಧಾಕರ್

0

ಶಿಕಾರಿಪುರ(Shikaripura): ಪಿಎಸ್‌ಐ ಪರೀಕ್ಷಾ ಅಕ್ರಮ ಸಂಗತಿ ತನಿಖಾ ಹಂತದಲ್ಲಿದ್ದು, ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್‌ಐ ಪರೀಕ್ಷೆ ಅಕ್ರಮದ ಮೊಕದ್ದಮೆ ತನಿಖಾ ಹಂತದಲ್ಲಿರುವುದರಿಂದ ಸರ್ಕಾರದಲ್ಲಿರುವವರು ಹೇಳಿಕೆ ಕೊಡುವುದು ಸರಿಯಲ್ಲ. ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ ಎಂದರು.

ಬಿಜೆಪಿ ನಾಯಕರು ನಮ್ಮ ಪಕ್ಷಕ್ಕೆ ಬರುತ್ತಾರೆ ಎಂದು ಕಾಂಗ್ರೆಸ್ ನಾಯಕರ ರೀತಿ ಹೇಳಿಕೊಂಡು ನಾವು ಒಡಾಡುವುದಿಲ್ಲ. ನಾವು ಮಾಡಿ ತೋರಿಸುತ್ತೇವೆ ಎಂದೂ ನುಡಿದರು.