ಮನೆ ಅಪರಾಧ ಎಪಿಎಂಸಿ ಏಜೆಂಟ್‌ ರವಿ ಬರ್ಬರ ಹತ್ಯೆ

ಎಪಿಎಂಸಿ ಏಜೆಂಟ್‌ ರವಿ ಬರ್ಬರ ಹತ್ಯೆ

0

ಮೈಸೂರು (Mysuru)-ಇಲ್ಲಿನ ಬಂಡಿಪಾಳ್ಯದ ಎಪಿಎಂಸಿ ಮಾರುಕಟ್ಟೆಯ ಏಜೆಂಟ್‌ ವೊಬ್ಬರನ್ನು ಇಂದು ಸಂಜೆ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಎಂ.ಜೆ.ರವಿ (35) ಹತ್ಯೆಯಾದ ವ್ಯಕ್ತಿ. ಎಪಿಎಂಸಿ ಮಳಿಗೆಯಲ್ಲಿ ಕರ್ತವ್ಯ ನಿರತರಾಗಿದ್ದಾಗಲೇ ಈ ದುಷ್ಕೃತ್ಯ ನಡೆದಿರುವುದಾಗಿ ತಿಳಿದುಬಂದಿದೆ.  

ಮೂಲತಃ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ನಿವಾಸಿಯಾದ ಎಂ.ಜೆ.ರವಿ ಉತ್ತನಹಳ್ಳಿಯಲ್ಲಿ ವಾಸವಾಗಿದ್ದರು. ಮೃತರಿಗೆ ತಂದೆ-ತಾಯಿ, ಪತ್ನಿ, ಮೂವರು ಮಕ್ಕಳು, ಸಹೋದರಿ ಇದ್ದಾರೆ.

ಎಎಸ್‌ಪಿ ಶಿವಕುಮಾರ್‌ ಆರ್‌.ದಂಡಿನ, ದಕ್ಷಿಣ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌, ಸಿಬ್ಬಂದಿ ಸ್ಥಳ ಮಹಜರು ನಡೆಸಿದರು.