ಮನೆ ಅಪರಾಧ ವಿದ್ಯುತ್ ಕಂಬಕ್ಕೆ ಕೇರಳ ಸಾರಿಗೆ ಬಸ್​ ಡಿಕ್ಕಿ: 6 ಜನರಿಗೆ ಗಾಯ

ವಿದ್ಯುತ್ ಕಂಬಕ್ಕೆ ಕೇರಳ ಸಾರಿಗೆ ಬಸ್​ ಡಿಕ್ಕಿ: 6 ಜನರಿಗೆ ಗಾಯ

0

ಮೈಸೂರು: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕೇರಳ ಸಾರಿಗೆ ಬಸ್​ ಡಿಕ್ಕಿ ಹೊಡೆದಿದ್ದು,  6 ಜನರಿಗೆ ಗಾಯಗಳಾಗಿರುವ ಘಟನೆ ಹುಣಸೂರಿನ ಅರಸು ಪ್ರತಿಮೆ ವೃತ್ತದ ಬಳಿ ನಡೆದಿದೆ,

ಬಸ್ಸು ಗೋಣಿಕೊಪ್ಪ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಕೇರಳ ಸರ್ಕಾರಿ ಬಸ್ ​ನಲ್ಲಿ ಸುಮಾರು 30 ಪ್ರಯಾಣಿಕರು ಇದ್ದರು ಎಂದು ತಿಳಿದು ಬಂದಿದೆ.

ಗಾಯಾಳುಗಳಿಗೆ ಹುಣಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.