ಮನೆ ರಾಜ್ಯ ಶೆಟ್ಟರ್‌ ಹಾದಿಯಲ್ಲಿ ಹಲವು ಮಂದಿ: ಸಿ.ಎಸ್.ಪುಟ್ಟರಾಜು

ಶೆಟ್ಟರ್‌ ಹಾದಿಯಲ್ಲಿ ಹಲವು ಮಂದಿ: ಸಿ.ಎಸ್.ಪುಟ್ಟರಾಜು

0

ಶ್ರೀರಂಗಪಟ್ಟಣ:ಕಾಂಗ್ರೆಸ್‌ ಸರ್ಕಾರದ ಆಡಳಿತದಿಂದ ಭ್ರಮನಿರಸನಗೊಂಡಿರುವ ಸಾಕಷ್ಟು ಕಾಂಗ್ರೆಸ್‌ ನಾಯಕರು ಲೋಕಸಭೆ ಚುನಾವಣೆ ಘೋಷಣೆ ನಂತರ ಜಗದೀಶ್‌ ಶೆಟ್ಟರ್‌ ಅವರ ಹಾದಿ ಹಿಡಿಯಲಿದ್ದಾರೆ.ಕಾಂಗ್ರೆಸ್‌ ತ್ಯಜಿಸಿ ಜೆಡಿಎಸ್‌, ಬಿಜೆಪಿ ಸೇರಲಿದ್ದಾರೆ ಎಂದು ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು ಹೇಳಿದರು.


ಸುದ್ದಿಗಾರರ ಜೊತೆ ಮಾತನಾಡಿದ ಅವರು ಜಗದೀಶ ಶೆಟ್ಟರ್‌ ಅವರಂತೆ ಇನ್ನೂ ಸಾಕಷ್ಟು ಮಂದಿ ಕಾಂಗ್ರೆಸ್‌ ತೊರೆಯಲಿದ್ದಾರೆ.ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಮತ್ತು ಹಾಸನ ಕ್ಷೇತ್ರಗಳು ಖಚಿತವಾಗಿ ಜೆಡಿಎಸ್‌ಗೆ ಸಿಗಲಿವೆ.ಅದರ ಜತೆಗೆ ಇತರ 3-4 ಕ್ಷೇತ್ರಗಳ ನಮಗೆ ಸಿಗುವ ವಿಶ್ವಾಸವಿದೆ. ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವಂತೆ ಪಕ್ಷದ ವರಿಷ್ಠರು ನನಗೆ ಸೂಚಿಸಿದರೆ ಅದನ್ನು ಪಾಲಿಸಬೇಕಾಗುತ್ತದೆ ಎಂದರು.
ಜ.22ರ ಬಳಿಕ ಇಡೀ ದೇಶದಲ್ಲಿ ರಾಜಕೀಯ ಚಿತ್ರಣ ಬದಲಾಗುತ್ತಿದೆ. ರಾಜ್ಯದಲ್ಲಿ ಕೂಡ ಬದಲಾವಣೆಯ ಗಾಳಿ ಬೀಸುತ್ತಿದೆ.ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಯ ಮೈತ್ರಿಕೂಟಕ್ಕೆ ಅಭೂತಪೂರ್ವ ಗೆಲುವು ಸಿಗಲಿದೆ ಎಂದರು.