ಮನೆ ಸುದ್ದಿ ಜಾಲ ಹೆಚ್.ಡಿ.ಕೋಟೆ: ಧಾರಾಕಾರ ಮಳೆಗೆ ಬೆಳೆ ನಾಶ

ಹೆಚ್.ಡಿ.ಕೋಟೆ: ಧಾರಾಕಾರ ಮಳೆಗೆ ಬೆಳೆ ನಾಶ

0

ಹೆಚ್.ಡಿ.ಕೋಟೆ (H.D.Kote)-ನಿನ್ನೆ ರಾತ್ರಿ ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಬಾಳೆ, ತೆಂಗಿನ ಗಿಡಗಳು ಸೇರಿದಂತೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.

ಹೆಚ್. ಡಿ. ಕೋಟೆ ಟೌನಿನ ಸರ್ವೆ ನಂಬರ್ 166 ರಲ್ಲಿ ಸಿ.ಅನಿಲ್ ಕುಮಾರ್ ರವರಿಗೆ ಸೇರಿದ 4 ಎಕರೆ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಮಳೆಯಿಂದಾಗಿ ನಾಶವಾಗಿದೆ.

ಜೊತೆಗೆ ಮನೆಗಳ ಶೀಟುಗಳು ಬಿರುಗಾಳಿಗೆ ಹಾರಿ ಹೋಗಿವೆ. ಇದರಿಂದ ಅನಿಲ್‌ ಕುಮಾರ್‌ ಅವರಿಗೆ ಸುಮಾರು 3 ಲಕ್ಷ ರೂ. ನಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.