ಮನೆ ಅಪರಾಧ ಕಾರುಗಳ ಮುಖಾಮುಖಿ ಡಿಕ್ಕಿ: ಓರ್ವ ಸಾವು, ಮೂವರ ಸ್ಥಿತಿ ಗಂಭೀರ

ಕಾರುಗಳ ಮುಖಾಮುಖಿ ಡಿಕ್ಕಿ: ಓರ್ವ ಸಾವು, ಮೂವರ ಸ್ಥಿತಿ ಗಂಭೀರ

0

ಶ್ರೀರಂಗಪಟ್ಟಣ: ಮುಖಾಮುಖಿ ಕಾರುಗಳ ಡಿಕ್ಕಿ ಓರ್ವ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ತಾಲೂಕಿನ  ಶ್ರೀನಿವಾಸ ಅಗ್ರಹಾರದ ಬಳಿಯ ಮೈಸೂರು -ಬೆಂಗಳೂರು ಹೈವೆ ರಸ್ತೆಯ ಮೇಲೆ ಈ ಘಟನೆ ನಡೆದಿದೆ.

ಮೈಸೂರು ಇಟ್ಟೆಗೆ ಗೂಡಿನ ನಿವಾಸಿ ಅಕ್ಷಯ್ (೨೬) ಮೃತಪಟ್ಟ ಕಾರಿನ ಸವಾರ. ಸುಧೀರ್ ಸೇರಿದಂತೆ ಇನ್ನೂ ಇಬ್ಬರಿಗೆ ಗಂಭೀರಗಾಯಗಳಾಗಿದ್ದು, ಮೈಸೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ.ಈ ಮೂವರು ಕೂಡ ಸಾವು ನೋವಿನ ಮಧ್ಯ ಒದ್ದಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೈಸೂರಿನಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಮೈಸೂರಿಗೆ ಹೋಗುತ್ತಿದ್ದ ಎರಡು ಕಾರುಗಳು ಮುಖಾ ಮುಖಿ ಡಿಕ್ಕಿಯ ವೇಗಕ್ಕೆ ಸಂಪೂರ್ಣ ಜಜ್ಜಿ ಹೋಗಿದ್ದು, ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲಿಸಿ, ಜಜ್ಕಿ ಹೋಗಿರುವ  ಕಾರುಗಳ ತೆರವು ಮಾಡಿ ಸಂಚಾರಕ್ಕೆ ಅನು ಮಾಡಿಕೊಟ್ಟಿದ್ದಾರೆ.

 ಈ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.