ಮನೆ ಅಪರಾಧ ಕುಣಿಗಲ್: ಮನೆ ಡೋರ್ ಲಾಕರ್ ಮೀಟಿ ನಗದು ಸೇರಿದಂತೆ ಚಿನ್ನಾಭರಣ ಕಳ್ಳತನ

ಕುಣಿಗಲ್: ಮನೆ ಡೋರ್ ಲಾಕರ್ ಮೀಟಿ ನಗದು ಸೇರಿದಂತೆ ಚಿನ್ನಾಭರಣ ಕಳ್ಳತನ

0

ಕುಣಿಗಲ್: ಶಿಕ್ಷಕನ ಮನೆ ಡೋರ್ ಲಾಕರ್ ಮೀಟಿ ನಗದು ಸೇರಿದಂತೆ ಚಿನ್ನಾಭರಣ ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ಕುಣಿಗಲ್ ಪಟ್ಟದ ಕೆಆರ್ ಎಸ್ ಅಗ್ರಹಾರದಲ್ಲಿ ನಡೆದಿದೆ,

ಪಟ್ಟಣದ ಕೆ.ಆರ್.ಎಸ್ ಅಗ್ರಹಾರದ ಶಿಕ್ಷಕ ಎ.ಎನ್ ಕೃಷ್ಣಮೂರ್ತಿ ಹಾಗೂ ಅವರ ಕುಟುಂಬ ಶನಿವಾರ ಸಂಬಂಧಿಕರ ದೇವರ ಕಾರ್ಯಕ್ರಮ ನಿಮಿತ ಮೈಸೂರಿಗೆ ತೆರಳಿದರು, ನಂತರ ಕೃಷ್ಣಮೂರ್ತಿ ಕುಟುಂಬವು ಕಾರ್ಯಕ್ರಮ ಮುಗಿಸಿಕೊಂಡು ಭಾನುವಾರ ರಾತ್ರಿ ಬಂದು ನೋಡಿದಾಗ ಮನೆಯ ಮುಂಭಾಗದ ಬಾಗಿಲಿನ ಲಾಕರ್ ಮೀಟಲಾಗಿತ್ತು.

ಬಳಿಕ ಮನೆ ಒಳಗೆ ಹೋಗಿ ನೋಡಿದಾಗ ಗೋದ್ರೇಜ್ ನ ಬೀಗ ಮುರಿಯಲಾಗಿತ್ತು. ಅಲ್ಲದೆ ಬಟ್ಟೆ ಬರೆ, ಚಲ್ಲಾಪಿಲ್ಲಿಯಾಗಿ ಬಿದ್ದಿತ್ತು, ಬೀರು ಸೇರಿದಂತೆ ಮತ್ತಿತರ ಕಡೆ ಇದ್ದ ಅಂದಾಜು ಸುಮಾರು 80 ಗ್ರಾಂ ಚಿನ್ನದ ವಡವೆ, ಸುಮಾರು ಒಂದುವರೆ ಕೆಜಿಗೂ ಅಧಿಕ ಬೆಳ್ಳಿ ಸಾಮಾಗ್ರಿಗಳು ಹಾಗೂ ನಗದು 10 ಸಾವಿರ ರೂ ದೋಚಿ ಪರಾರಿಯಾಗಿದ್ದಾರೆ ಎಂದು ಕೃಷ್ಣಮೂರ್ತಿ ಸಂಬಂಧಿ‌ ಕೇಬಲ್ ಮಧು ತಿಳಿಸಿದ್ದಾರೆ.

ಸೋಮವಾರ ಬೆಳಗ್ಗೆ ಪಟ್ಟಣದ ಪೊಲೀಸರು, ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ಕೈಗೊಂಡಿದ್ದಾರೆ, ಇದು ಪ್ರಾರ್ಥಮಿಕ ವರದಿಯಾಗಿದ್ದು ಪೊಲೀಸರ ಪರಿಶೀಲನೆ ಹಾಗೂ ತನಿಖೆ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.