ಮನೆ ಅಪರಾಧ ಆಸ್ತಿ ವಿಚಾರ:ಮಗನಿಂದ ತಂದೆಯ ಬರ್ಬರ ಹತ್ಯೆ

ಆಸ್ತಿ ವಿಚಾರ:ಮಗನಿಂದ ತಂದೆಯ ಬರ್ಬರ ಹತ್ಯೆ

0

ಮಂಡ್ಯ:ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತಂಡದೆಯ ಮೇಲೆ ಸಿಟ್ಟಾದ ಮಗ,ತನ್ನ ತಂದೆಯನ್ನೆ ಹತ್ಯೆ ಮಾಡಿರುವ ಘಟನೆ ತಾಲೂಕಿನ ಸುಂಡಹಳ್ಳಿ ಗ್ರಾಮದಲ್ಲಿ ನಡೆದಿದೆ.


ನಂಜಪ್ಪ (65) ಮೃತ ದುರ್ದೈವಿಯಾಗಿದ್ದಾನೆ.

ಮಗಳ ಹೆಸರಿಗೆ ಆಸ್ತಿ ಬರೆದುಕೊಟ್ಟಿದ್ದ ತಂದೆ ನಂಜಪ್ಪನ ಮೇಲೆ ಸಿಟ್ಟಾಗಿದ್ದ ಮಗ ಮಹದೇವ,ಆಸ್ತಿ ಕೊಡಲಿಲ್ಲವೆಂದು ಆಕ್ರೋಶಗೊಂಡು ಇಂದು ಬೆಳಗ್ಗಿನ ಜಾವ ರಸ್ತೆಯಲ್ಲಿ ಅಟ್ಟಾಸಿಕೊಂಡು ಹೋಗಿ,ತಂದೆಯ ತಲೆ ಮೇಲೆ ಕಲ್ಲು ಎತ್ತಾಕ್ಕಿ ಭೀಕರ ಹತ್ಯೆ ಮಾಡಿದ್ದಾನೆ.
ಈ ವೇಳೆ ತಡೆಯಲು ಬಂದ ತಾಯಿ ಮಹದೇವಮ್ಮಳಿಗೆ ಗಾಯಗಳಾಗಿದೆ.
ನಂಜಪ್ಪ ಹತ್ಯೆ ಮಾಡಿದ ಬಳಿಕ ಮಗ ಮಹದೇವ ಅಲ್ಲಿಂದ ಪರಾರಿಯಾಗಿದ್ದಾನೆ.
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಂತರ ಮಂಡ್ಯ ಮಿಮ್ಸ್ ಶವಾಗಾರಕ್ಕೆ ಮೃತ ದೇಹ ರವಾನಿಸಿದ್ದಾರೆ.