ಮನೆ ಅಪರಾಧ ಪಲ್ಟಿಯಾದ ಕಾರು: ಸವಾರರು ಪ್ರಾಣಾಪಾಯದಿಂದ ಪಾರು.

ಪಲ್ಟಿಯಾದ ಕಾರು: ಸವಾರರು ಪ್ರಾಣಾಪಾಯದಿಂದ ಪಾರು.

0

ಶ್ರೀರಂಗಪಟ್ಟಣ:ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಹುರುಳಿಕೊಂಡು ಹೊಲದಲ್ಲಿ ಬಿದ್ದಿರುವ ಘಟನೆ ತಾಲೂಕಿನ ಗಣಂಗೂರು ಗ್ರಾಮದ ಬಳಿಯಲ್ಲಿ ನಡೆದಿದೆ.


ಮೈಸೂರಿನಿಂದ -ಬೆಂಗಳೂರಿಗೆ ಹೋಗುತ್ತಿದ್ದ ಹುಂಡೈ ಜಂಟ್ ಸಂಖ್ಯೆ ಕೆಎ೦೨ ಎಎಚ್ ೭೬೮೫ ಕಾರ್ ಹೈವೆ ಸರ್ವಿಸ್ ರೋಡ್ ನಲ್ಲಿ ತಿ ವೇಗದಿಂದ ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರ ತಪ್ಪಿದೆ. ಇದರಿಂದ ಪಕ್ಕದ ಹಳ್ಳಕ್ಕೆ ಕಾರು ಪಲ್ಟಿ ಹೊಡೆದಿದ್ದು, ಕಾರ್ ನಲ್ಲಿದ್ದ ಐದು ಜನ ಯುವಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಸದ್ಯ ಯಾವುದೇ ಪ್ರಾಣಾಪಾಯ ಇಲ್ಲದೆ ಪಾರಾಗಿದ್ದಾರೆ.ಅಪಘಾತವಾದ ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.ಇವರೆಲ್ಲರೂ ಮಂಡ್ಯ ಮಲ್ಲಿಗೆರೆಯ ನಿವಾಸಿಗಳೆಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.ಈ ಕುರಿತು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.