ಮುದ್ದೇಬಿಹಾಳ : ರೈತರ ಪಂಪಸೆಟ್ ಕಳ್ಳತನ ಮಾಡುತ್ತಿದ್ದ ತಂಡದ ಓರ್ವ ಸದಸ್ಯನನ್ನು ಮಧ್ಯರಾತ್ರಿ ರೈತರೆ ಹಿಡಿದು, ಕಟ್ಟಿಹಾಕಿ ಬೆಳಿಗ್ಗೆ ಪೊಲೀಸರಿಗೊಪ್ಪಿಸಿದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಅಡವಿ ಹುಲಗಬಾಳ ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ.
ಅಡವಿ ಹುಲಗಬಾಳ ಕೆರೆ, ಜಮೀನುಗಳಲ್ಲಿನ ಕೊಳವೆ ಭಾವಿ, ತೆರೆದ ಭಾವಿ ಮುಂತಾದವುಗಳಿಗೆ ರೈತರು ತಮ್ಮ ಹೊಲಕ್ಕೆ ನೀರು ಪಡೆದುಕೊಳ್ಳಲು ಪಂಪಸೆಟ್ ಅಳವಡಿಸಿದ್ದಾರೆ. ಮೇಲಿಂದ ಮೇಲೆ ಪಂಪಸೆಟ್ ಕಳ್ಳತನವಾಗುತ್ತಿದ್ದವು. ಆದರೆ ಕಳ್ಳರು ಸಿಕ್ಕಿಬಿದ್ದಿರಲಿಲ್ಲ. ಶುಕ್ರವಾರ ಮಧ್ಯರಾತ್ರಿ ರೈತನೊಬ್ಬ ಆರೋಗ್ಯ ಸಮಸ್ಯೆಯಿಂದಾಗಿ ಸರ್ಕಾರಿ ಆಸ್ಪತ್ರೆಗೆ ಹೋಗುವಾಗ ಸೇತುವೆ ಹತ್ತಿರ ಯಾರೋ ಓಡಾಡಿದಂತಾಗಿದೆ. ಈ ವೇಳೆ ಕೆಲ ರೈತರನ್ನು ಕರೆದು ಹುಡುಕಾಡಿದಾಗ ಒಬ್ಬ ಸೇತುವೆ ಕೆಳಗೆ ಅಡಗಿ ಕುಳಿತಿರುವುದನ್ನು ಕಂಡು ಹೋಗಿ ಹಿಡಿದಿದ್ದಾರೆ.
ಇನ್ನಿಬ್ಬರು ಸ್ಥಳದಿಂದ ಓಡಿ ಪರಾರಿಯಾಗಿದ್ದಾರೆ. ಸಿಕ್ಕಿಬಿದ್ದ ಯುವಕನನ್ನು ಅಲ್ಲೇ ಇದ್ದ ಕಂಬಕ್ಕೆ ಕಟ್ಟಿಹಾಕಿ ಇನ್ನಿಬ್ಬರಿಗಾಗಿ ಹುಡುಕಾಡುವಷ್ಟರಲ್ಲಿ ಬೆಳಗಾಗಿತ್ತು. ಸಿಕ್ಕ ಒಬ್ಬ ಯುವಕನನ್ನು ಪೊಲೀಸರಿಗೆ ಒಪ್ಪಿಸಲು 112ಗೆ ಕರೆ ಮಾಡಿದ್ದಾರೆ.
ಯುವಕನನ್ನು ಪೊಲೀಸರಿಗೆ ಒಪ್ಪಿಸುವುದಕ್ಕೂ ಮುನ್ನ ಗ್ರಾಮವ್ಯಾಪ್ತಿಯ ತಾಳಿಕೋಟೆ ಪೊಲೀಸ್ ಠಾಣೆಯ ಪಿಎಸೈ ಅವರನ್ನು ಸ್ಥಳಕ್ಕೆ ಕರೆಸುವಂತೆ ರೈತರು ಪಟ್ಟು ಹಿಡಿದರು. ಇದರಿಂದ ಕೆಲಕಾಲ ಗೊಂದಲ ನಿರ್ಮಾಣಗೂಂಡು 112 ಸಿಬ್ಬಂದಿ ಹಾಗೂ ರೈತರ ಮಧ್ಯೆ ವಾಗ್ವಾದ ನಡೆಯಿತು.
ಈ ಸಂದರ್ಭ ರೈತರು ಮಾತನಾಡಿ ಬಹಳ ದಿನಗಳಿಂದ ರೈತರ ಪಂಪಸೆಟ್ಗಳು ರಾತ್ರೋರಾತ್ರಿ ಕಳ್ಳತನ ಆಗುತ್ತಿದ್ದವು , ಗೋನಾಳ ಗ್ರಾಮದ ಪಂಪಸೆಟ್ ದುರಸ್ತಿ ಮಾಡುವ ವ್ಯಕ್ತಿಯ ಮನೆ ಮುಂದೆ ರಿಪೇರಿಗಾಗಿ ಇಟ್ಟಿದ್ದ ಪಂಪಸೆಟ್ ಗಳು ಕಳ್ಳತನವಾಗಿದ್ದವು.
ಅಡವಿ ಹುಲಗಬಾಳ, ಅಡವಿ ಸೋಮನಾಳ, ಗೋನಾಳ ಎಸ್ ಹೆಚ್, ಕವಡಿಮಟ್ಟಿ , ಜಲಪೂರ ,ಸುತ್ತಲಿನ ರೈತರಿಗೆ ಇದರಿಂದ ಸಾಕಷ್ಟು ತೊಂದರೆ ಆಗಿತ್ತು. ಹಲವು ಬಾರಿ ಪೂಲೀಸರ ಗಮನಕ್ಕೆ ತಂದರೂ, ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ರೆಡ್ ಹ್ಯಾಂಡ್ ಆಗಿ ಕಳ್ಳ ಸಿಕ್ಕಿಬಿದ್ದಿದ್ದಾನೆ. ಇವನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದರೆ ಇವರ ತಂಡದ ಮಾಹಿತಿ ಸಿಗುತ್ತದೆ. ಹಾಗಾಗಿ ಪಿಎಸೈ ಇಲ್ಲಿಗೆ ಬರಲೇಬೇಕೆಂದು ಒತ್ತಾಯಿಸಿದರು.
ಪಿಎಸೈ ಎಸ್ ಎಸ್ ಎಲ್ ಸಿ ಪರೀಕ್ಷೆ ಹಾಗೂ ಚುನಾವಣಾ ಕರ್ತವ್ಯದಲ್ಲಿ ಇರುವುದರಿಂದ 112 ದಲ್ಲಿ ಕಳ್ಳನನ್ನು ಕಳಿಸಲು ತಿಳಿಸಿದ ಮೇಲೆ ಗ್ರಾಮಸ್ಥರು ಸಹಕರಿಸಿದರು. ಕಳ್ಳನನ್ನು 112 ವಾಹನದಲ್ಲಿ ಕೂರಿಸಿ ಬೇರೆ ವಾಹನದಲ್ಲಿ ಹಿಂಬಾಲಿಸಿ ಪೊಲೀಸ್ ಠಾಣೆಗೆ ತೆರಳಿದರು .
ಕಳ್ಳನನ್ನು ಅಮೂಲಾಗ್ರವಾಗಿ ವಿಚಾರಿಸಿ ಕಳ್ಳತನವಾದ ಪಂಪಸೆಟ್ ಗಳನ್ನು ಮರಳಿ ಕೊಡಿಸಬೇಕೆಂದು ರೈತರು ಒತ್ತಾಯಿಸಿದರು.
ಘಟನಾ ಸ್ಥಳದಲ್ಲಿ ಕಳ್ಳರು ವಿದ್ಯುತ್ ಸಂಪರ್ಕದ ಕೇಬಲ್ ಕತ್ತರಿಸಿದ್ದ, ಪಂಪಸೆಟ್ ಸ್ಟಾರ್ಟರ್ ಬಾಕ್ಸ್ ಪ್ರತ್ಯೇಕಿಸಿ ಇಟ್ಟಿದ್ದು ಪತ್ತೆಯಾಗಿದೆ.
ಮೈಸೂರಿನ ವಾಸನ್ ಐ ಕೇರ್ ನ 14ನೇ ವಾರ್ಷಿಕೋತ್ಸವದ ಆಚರಣೆ
"ವಾಲ್ಮೀಕಿ ಅಭಿವೃದ್ಧಿ ನಿಗಮ" ದಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರ ಖಂಡಿಸಿ ಬೃಹತ್ ಪ್ರತಿಭಟನೆ
ಮೈಸೂರಿನಲ್ಲಿ,"ದಿ ಜ್ಯುವೆಲರಿ ಶೋ" ಉದ್ಘಟಿಸಿದ ನಟಿ ಆರಾಧನ
SSLC- PUC ಪಾಸಾದವರಿಗೆ ಉದ್ಯೋಗವಕಾಶ
ಮೈಸೂರಿನಲ್ಲಿ,"ದಿ ಜ್ಯುವೆಲರಿ ಶೋ" ಉದ್ಘಟಿಸಿದ ನಟಿ ಆರಾಧನ
ಕುಸಿದ ಬಾವಿ.. ಭಯಾನಕ ದೃಶ್ಯ..!
SSC CGL ನೇಮಕಾತಿ ಅಧಿಸೂಚನೆ
ನಾಡಪ್ರಭು ಕೆಂಪೇಗೌಡ ಜಯಂತಿ, ಪ್ರಯುಕ್ತ 2000 ಹೋಳಿಗೆ ಹಂಚಿಕೆ !
FCI ಹುದ್ದೆಗೆ ಆನ್’ಲೈನ್’ನಲ್ಲಿ ಅರ್ಜಿ ಸಲ್ಲಿಸಿ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.