ಗದಗ: ಸೋದರ ಮಾವನ ಮನೆಯಲ್ಲೇ ಕಳ್ಳತನ ಮಾಡಿದ್ದ ಅಳಿಯನನ್ನು ಶಿರಹಟ್ಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಜಯ ಕಳ್ಳಿ ಬಂಧಿತ ಆರೋಪಿ.
ಕಳೆದ ವರ್ಷ ಡಿಸೆಂಬರ್ 6 ರಂದು ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದ ಅಶೋಕ ಪಲ್ಲೇದ ಎಂಬುವರ ಮನೆ ಕಳ್ಳತನವಾಗಿತ್ತು. 5 ಲಕ್ಷ ನಗದು, 240 ಚಿನ್ನಾಭರಣ ಲೂಟಿಯಾಗಿತ್ತು. ಮನೆ ಮಾಲೀಕ ಕೂಡ ಲಕ್ಷಾಂತರ ಹಣ, ಚಿನ್ನಾಭರಣ ಕಳೆದುಕೊಂಡು ಕಂಗಾಲಾಗಿದ್ದನು. ಇನ್ನು ವಿಚಾರ ತಿಳಿದು ಶಿರಹಟ್ಟಿ ಠಾಣೆ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆ ಮಾಲಿಕ ಅಶೋಕ ಪಲ್ಲೇದ ಶಿರಹಟ್ಟಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದರು. ಅಶೋಕ ಪಲ್ಲೇದ ಅವರ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಪೊಲೀಸರಿಗೆ, ಇದು ಪರಿಚಿತರೇ ಮಾಡಿದ ಕಳ್ಳತನ ಎಂದು ಗೋತ್ತಾಯಿತು. ಆರೋಪಿಗಾಗಿ ಬಲೆ ಬೀಸಿದ್ದ ಪೊಲೀಸರಿಗೆ ಈ ಕಳ್ಳತನ ಮಾಡಿದ್ದು, ಅಶೋಕ ಪಲ್ಲೇದ ಸೋದರ ಅಳಿಯ ವಿಜಯ ಕಳ್ಳಿ ಆ್ಯಂಡ್ ಗ್ಯಾಂಗ್ ಅಂತ ತಿಳಿಯಿತು. ಕೂಡಲೆ ಅವರನ್ನು ಬಂಧಿಸಿ, ವಿಚಾರಣೆಗೆ ಒಳಡಪಡಿಸಿದಾಗ, ಸತ್ಯ ಬಾಯಿಬಿಟ್ಟಿದ್ದಾರೆ.
ಸೋದರ ಮಾವ ಅಶೋಕ ಪೆಲ್ಲದ ಮನೆಯಲ್ಲಿರುವ ಹಣ ಮತ್ತು ಚಿನ್ನ ಅಳಿಯ ವಿಜಯ ಕಳ್ಳಿಗೆ ತಿಳಿದಿತ್ತು. ಆಗ ವಿಜಯ ಕಳ್ಳಿ ಮಾವನ ಮನೆ ಲೂಟಿ ಮಾಡಬೇಕು ಅಂತ ಹೊಂಚು ಹಾಕಿದ್ದಾನೆ. ಅದೊಂದು ದಿನ ಅಶೋಕ ಪೆಲ್ಲದ ಪುತ್ರನಿಗೆ ಅಪಘಾತವಾಗಿ ಇಡೀ ಕುಟುಂಬಸ್ಥರು ಆಸ್ಪತ್ರೆಯಲ್ಲಿದ್ದರು. ಮನೆಯಲ್ಲಿ ಯಾರೂ ಇರಲಿಲ್ಲ. ಇದೇ ಸೂಕ್ತ ಸಮಯ ಅಂತ ವಿಜಯ ಕಳ್ಳಿ, ರವಿ ಬಾರಿಕಾಯಿ ಎಂಬಾತನ ಜೊತೆ ಸೇರಿ ಡಿಸೆಂಬರ್ 6 ನಡುರಾತ್ರಿ ಇಡೀ ಗ್ರಾಮದ ಕರೆಂಟ್ ಕಟ್ ಮಾಡಿದ್ದಾನೆ. ಬಳಿಕ ಮಾವ ಅಶೋಕ ಪೆಲ್ಲದ ಮನೆಗೆ ನುಗ್ಗಿ 5 ಲಕ್ಷ ನಗದು, 240 ಚಿನ್ನಾಭರಣ ಕದ್ದಿದ್ದಾನೆ.
ಲೂಟಿ ಮಾಡಿದ ಬಳಿಕ ಅಳಿಯ ವಿಜಯ ಕಳ್ಳಿ, ರವಿ ಬಾರಿಕಾಯಿ ಮಸ್ತ್ ಮಜಾ ಮಾಡಿದ್ದಾರೆ. ಗೋವಾದಲ್ಲಿ ಕ್ಯಾಸಿನೋ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧೆಡೆ ಸುತ್ತಾಡಿ ಮಜಾ ಮಾಡಿದ್ದಾರೆ. ಅಷ್ಟೇ ಅಲ್ಲದೆ ಐಪಿಎಲ್ ಬೆಟ್ಟಿಂಗ್ ಹಾಗೂ ಇಸ್ಪೇಟ್ ಆಡಿ ಕಳ್ಳತನ ಮಾಡಿದ ಲಕ್ಷಾಂತರ ಹಣ ಖಾಲಿಯಾಗೋವವೆಗು ಮೋಜು, ಮಸ್ತಿ ಮಾಡುತ್ತಿದ್ದರು. ಈ ಎಲ್ಲ ವಿಚಾರವನ್ನು ವಿಜಯ ಕಳ್ಳಿ ಮತ್ತು ಆತನ ಗ್ಯಾಂಗ್ ಪೊಲೀಸರ ಮುಂದೆ ಬಾಯಿ ಬಿಟ್ಟಿದೆ.
ಶಿರಹಟ್ಟಿ ಸಿಪಿಐ ನಾಗರಾಜ್ ಮಾಡಳ್ಳಿ, ಪಿಎಸ್ಐ ಶಿವಾನಂದ, ಪೊಲೀಸ್ ಪೆದೆಗಳಾದ ಹನುಮಂತ ದೊಡ್ಡಮನಿ, ಚನ್ನಬಸುವ, ಸೋಮು ನೇತೃತ್ವದ ತಂಡ ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. 120 ಗ್ರಾಂ ಬಂಗಾರ ಮಾತ್ರ ವಶಪಡಿಸಿಕೊಂಡಿದ್ದು, 5 ಲಕ್ಷ ಹಣ, ಇನ್ನುಳಿದ ಚಿನ್ನಾಭರಣವನ್ನು ಕಿಲಾಡಿಗಳು ಮೋಜು, ಮಸ್ತಿ ಮಾಡಿ ಖಾಲಿ ಮಾಡಿದ್ದಾರೆ.
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಭರ್ತಿ
ಈರುಳ್ಳಿ ಮೇಲಿರುವ ಕಪ್ಪು ಚುಕ್ಕೆ ತರುತ್ತೆ ಆಪತ್ತು ಆರೋಗ್ಯಕ್ಕೆ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.