ಮನೆ ಸ್ಥಳೀಯ ಮತದಾನ ಜಾಗೃತಿ: ವಿಶೇಷ ಚೇತನರಿಂದ ಬೈಕ್ ರ್‍ಯಾಲಿ

ಮತದಾನ ಜಾಗೃತಿ: ವಿಶೇಷ ಚೇತನರಿಂದ ಬೈಕ್ ರ್‍ಯಾಲಿ

0

ಮೈಸೂರು: ಮತದಾನ ಜಾಗೃತಿಗಾಗಿ ಪಿರಿಯಾಪಟ್ಟಣ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ವಿಶೇಷಚೇತನರ ಬೈಕ್ ರ್ಯಾಲಿಗೆ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಿ.ಬಿ.ಸುನೀಲ್ ಕುಮಾರ್ ಅವರು ಪ್ರತಿಜ್ಞಾವಿಧಿ ಬೋಧಿಸುವ ಮೂಲಕ ಚಾಲನೆ ನೀಡಿದರು.

Join Our Whatsapp Group

ಪಿರಿಯಾಪಟ್ಟಣ ತಾಲ್ಲೂಕು ಪಂಚಾಯಿತಿ ಆವರಣದಿಂದ ಬೆಟ್ಟದಪುರ ವೃತ್ತದವರೆಗೆ ವಿಶೇಷಚೇತನರು ನಮ್ಮ ಮತ, ನಮ್ಮ ಹಕ್ಕು, ಕಡ್ಡಾಯವಾಗಿ ಮತದಾನ ಮಾಡಿ ಘೋಷಣೆಗಳ ಪ್ರದರ್ಶನದ ಜೊತೆಗೆ ಬೈಕ್ ರ್ಯಾಲಿ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸಿದರು.

ಈ ಸಂದರ್ಭ ಟಿಪಿಓ ವಸಂತಲಕ್ಷ್ಮೀ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕರಾದ ಜಿ.ಸಿ.ಮಹದೇವ್, ಸಿಡಿಪಿಯು ಮಮತಾ, ವಿಶೇಷಚೇತನರ ನೋಡಲ್ ಅಧಿಕಾರಿ ಸುನೀತ ಹಾಗೂ ವಿಶೇಷಚೇತನರು ಭಾಗವಹಿಸಿದ್ದರು.