ಹುಬ್ಬಳ್ಳಿ: ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡ ಶಕ್ತಿಯೇ ಪ್ರಹ್ಲಾದ ಜೋಶಿ. ಅವರನ್ನು ಸೋಲಿಸುವುದೇ ನಮ್ಮ ಧರ್ಮಯುದ್ಧ ಎಂದು ಶಿರಹಟ್ಟಿಯ ದಿಂಗಾಲೇಶ್ವರ ಸ್ವಾಮೀಜಿ ಹರಿಹಾಯ್ದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೋಶಿ 20 ವರ್ಷದಲ್ಲಿ ಮಾಡಿದ್ದು ಲಿಂಗಾಯತರು, ಹಿಂದುಳಿದವರುನ್ನು ತುಳಿದಿದ್ದೇ ದೊಡ್ಡ ಸಾಧನೆ. ಅವರು ಅಧಿಕಾರದಲ್ಲಿ ತಮ್ಮ ಸಮಾಜದ ಎಷ್ಟು ಜನಕ್ಕೆ ಕೆಲಸಕ್ಕೆ ಸೇರಿಸಿದರು. ಇತರೆ ಸಮಾಜದವರನ್ನು ಸೇರಿಸಿದರು ಎಂಬುದನ್ನು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.
ಜೋಶಿ ಒಡೆದಾಳುವ ಕೆಲಸಕ್ಕೆ ಕೈ ಹಾಕಿದ್ದಾರೆ. ಒಂದು ಮಠವನ್ನು ಎರಡು ಮಾಡುವ ಕೆಲಸ ಮಾಡುತ್ತಿದ್ದಾರೆ. ಶಿರಹಟ್ಟಿ ಮಠದ ಗುರು-ಶಿಷ್ಯರನ್ನು ಅಗಲಿಸುವ ಕಾರ್ಯ ಮಾಡುತ್ತಿದ್ದಾರೆ. ಇವರು ಹೀಗೆ ಮುಂದುವರೆಸಿದರೆ, ದೊಡ್ಡ ಪರಿಣಾಮ ಎದುರೀಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೋಶಿಯವರಿಗೆ ಅಧಿಕಾರದಲ್ಲಿದ್ದಾಗ ಸ್ವಾಮಿಗಳು, ಮಠಗಳು ಬೇಡ. ನಮ್ಮಿಬ್ಬರ ಮಧ್ಯೆ ಒಡಕುಂಟು ಮಾಡುವ ಕೆಲಸಕ್ಕೆ ಕೈ ಹಾಕುವಂತಹ ನಿಮ್ಮ ಹುಚ್ಚು ಸಾಹಸಕ್ಕೆ ಕೈ ಬಿಡಬೇಕು ಎಂದರು.
ನೀವು ಸಂಸದರಾದ ಮೇಲೆ ನಮ್ಮ ಸಂಸ್ಕೃತಿ, ಪರಂಪರೆ, ಮಠಗಳ ಪರಂಪರೆ ನಾಶ ಮಾಡಿದ್ದಾರೆ. ಮಠಗಳಿಗೆ ಹೋಗುವುದು, ಯಾರೋ ತಮಗೆ ಹಾಕಿದ ಶಾಲನ್ನೇ ಸ್ವಾಮಿಗಲಿಗೆ ಹಾಕಿ, ಕಾಣಿಕೆ ಕೊಟ್ಟು ಅವರು ನಮ್ಮ ಪರವಾಗಿದ್ದಾರೆ ಎಂದು ಬಿಂಬಿಸಲು ಹೊರಟಿದ್ದಾರೆ. ಇದೇನಾ ಸಂಸ್ಕೃತಿ ಎಂದು ಕುಟುಕಿದರು.
ನಮ್ಮ ಸಮಾಜದ ಹೆಣ್ಣು ಮಗಳ ಬರ್ಬರ ಹತ್ಯೆಯಾದರೂ ಲಿಂಗಾಯತರ ಹೆಣದ ಮೇಲೆ ಜೋಶಿ ರಾಜಕಾರಣ ಮಾಡುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.