ಮನೆ ಸುದ್ದಿ ಜಾಲ ಮೈಸೂರು ಅರಮನೆ ಆವರಣದಲ್ಲಿ ಶ್ರೀಲಕ್ಷ್ಮೀ ರಮಣಸ್ವಾಮಿ ಬ್ರಹ್ಮರಥೋತ್ಸವ

ಮೈಸೂರು ಅರಮನೆ ಆವರಣದಲ್ಲಿ ಶ್ರೀಲಕ್ಷ್ಮೀ ರಮಣಸ್ವಾಮಿ ಬ್ರಹ್ಮರಥೋತ್ಸವ

0

ಮೈಸೂರು(Mysuru): ಮೈಸೂರು ಅರಮನೆ ಆವರಣದಲ್ಲಿರುವ ಶ್ರೀಲಕ್ಷ್ಮೀರಮಣ ಸ್ವಾಮಿ ಬ್ರಹ್ಮರಥೋತ್ಸವವು ಮಂಗಳವಾರ ನೆರವೇರಿತು.

ನಸುಕಿನಿಂದಲೇ ವಿವಿಧ ಪೂಜಾಕೈಂಕರ್ಯಗಳು ದೇಗುಲದಲ್ಲಿ ಆರಂಭವಾಯಿತು. ಬೆಳಿಗ್ಗೆ 11.12ರ ಶುಭಲಗ್ನದಲ್ಲಿ ರಥೋತ್ಸವ ನಡೆಯಿತು.

ಜಿಟಿಜಿಟಿ ಮಳೆಯ ನಡುವೆ ನೂರಾರು ಭಕ್ತರು ರಥೋತ್ಸವದಲ್ಲಿ ಭಾಗಿಯಾದರು. ಅರಮನೆ ಆವರಣದಲ್ಲಿ 1499ರಲ್ಲಿ ನಿರ್ಮಾಣವಾದ ಈ ದೇಗುಲವು ಧಾರ್ಮಿಕ ದತ್ತಿ ಇಲಾಖೆಗೆ ಸೇರಿದೆ.

ಮೇ 18ರಂದು ರಾತ್ರಿ ನಿತೋತ್ಸವ, 19ರಂದು ಬೆಳಿಗ್ಗೆ ಅವಭೃಥೋತ್ಸವ, ರಾತ್ರಿ ಧ್ವಜಾರೋಹಣ, 20ರಂದು ಬೆಳಿಗ್ಗೆ ಮಹಾಭಿಷೇಕ, ರಾತ್ರಿ ದ್ವಾದಶರಾಧನ ಕಾರ್ಯಕ್ರಮಗಳು ನಡೆಯಲಿವೆ.