ಮನೆ ಅಪರಾಧ ಮುಂಡರಗಿ: ಯುವಕನ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಹತ್ಯೆ

ಮುಂಡರಗಿ: ಯುವಕನ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಹತ್ಯೆ

0

ಮುಂಡರಗಿ: ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಹೊರವಲಯದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಯುವಕನೋರ್ವನ ತಲೆಗೆ ಬೀಯರ್ ಬಾಟಲಿಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆಯು ಗುರುವಾರ ನಡೆದಿದೆ.

Join Our Whatsapp Group

ಹತ್ಯೆಯಾಗಿರುವ ಯುವಕ ಸುಭಾಸ ನಾಯಕನು ಕೊಪ್ಪಳ ಜಿಲ್ಲೆಯ ಹ್ಯೆದರ ನಗರ ತಾಂಡಾದ ನಿವಾಸಿ ಆಗಿದ್ದು. ಬುಧವಾರ ರಾತ್ರಿ ಮುಂಡರಗಿ ಹೊರವಲಯದ ಹೌಸೀಂಗ್ ಬೋರ್ಡ್ ನ ಕಾಲೋನಿಯ ಬಯಲಿನಲ್ಲಿ ಇಬ್ಬರು ಗೆಳೆಯರ ಜೊತೆಗೆ ಕೂಡಿಕೊಂಡು ಪಾರ್ಟಿ ಮಾಡಿದ್ದಾನೆ. ಆದರೆ ಅದೆ ಬಯಲಿನಲ್ಲಿ ತಡರಾತ್ರಿ ಸುಭಾಸ ನಾಯಕನನ್ನು ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಹತ್ಯೆ ಮಾಡಿರುವ ಘಟನೆ ನಡೆದಿರುವ ಬಗ್ಗೆ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಸುಭಾಸ ನಾಯಕ ಜೊತೆ ಇದ್ದ ಗೆಳೆಯರು ತಾಂಡಾಕ್ಕೆ ಹೋಗಿ ಹತ್ಯೆಯ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳದಲ್ಲಿ ಪೋಲೀಸರು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಘಟನೆಯ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ.