ಮನೆ ಸ್ಥಳೀಯ ಅಕ್ಕನ ಬಳಗ ಶಾಲೆಯಲ್ಲಿ ಮಕ್ಕಳಿಗೆ ಗುಲಾಬಿ ಹೂವು, ಮೈಸೂರ್ ಪಾಕ್, ಪುಸ್ತಕ ಪೆನ್ನು ನೀಡಿ ಸ್ವಾಗತ...

ಅಕ್ಕನ ಬಳಗ ಶಾಲೆಯಲ್ಲಿ ಮಕ್ಕಳಿಗೆ ಗುಲಾಬಿ ಹೂವು, ಮೈಸೂರ್ ಪಾಕ್, ಪುಸ್ತಕ ಪೆನ್ನು ನೀಡಿ ಸ್ವಾಗತ  

0

ಮೈಸೂರು: ನಗರದ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯಲ್ಲಿ 2024-25ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ ಅಪೂರ್ವ ಸ್ನೇಹ ಬಳಗ ಹಾಗೂ ಅರಿವು ಸಂಸ್ಥೆಯ ಸದಸ್ಯರಗಳು ಅಕ್ಕನ ಬಳಗ ಶಾಲೆಯ ಶಿಕ್ಷಕರ ಜೊತೆಗೂಡಿ ಶಾಲೆಯನ್ನು ಮಾವಿನ ಸೊಪ್ಪು ತೋರಣದಲ್ಲಿ ಅಲಂಕರಿಸಿ  ಮಕ್ಕಳಿಗೆ ಆರತಿ ಬೆಳಗಿ , ಹೂವಿನ ಮೇಲೆ ನಡೆಸಿಕೊಂಡು , ಗುಲಾಬಿ ಹೂ ಹಾಗೂ ಮೈಸೂರು ಪಾಕ್ ಮತ್ತು ಪುಸ್ತಕ ಪೆನ್ನು ನೀಡಿ ಶಾಲೆಗೆ ವಿಶೇಷವಾಗಿ ಬರಮಾಡಿಕೊಂಡರು.

Join Our Whatsapp Group

ಇದೇ ಸಂದರ್ಭದಲ್ಲಿ ಹಿರಿಯ ಸಮಾಜಸೇವಕರಾದ ಕೆ ರಘುರಾಮ್ ವಾಜಪೇಯಿ ಮಾತನಾಡಿ, ವಿದ್ಯಾದೇವತೆ ಇರುವುದು ಕರ್ನಾಟಕದ ಶೃಂಗೇರಿಯಲ್ಲಿ, ವಿದ್ಯಾರ್ಥಿಯಾದವರು ಅಕ್ಷರಭ್ಯಾಸದಿಂದ ಹಿಡಿದು ಶಾಲಾ ಪ್ರವೇಶ ಮತ್ತು ಪರೀಕ್ಷೆ ಸಮಯದಲ್ಲಿ ಸರಸ್ವತಿ ಪೂಜೆ ಹೀಗೆ ಮೂರು ಬಾರಿ ಶಾರದೆಯನ್ನು ಉಪಾಸನೆ ಮಾಡುತ್ತಾರೆ. ಆ ಉಪಾಸನೆಗೆ ಬೆಲೆ ಕಟ್ಟಲಾಗದು, ಆದುದ್ದರಿಂದ ಸರಸ್ವತಿ ಪೂಜೆ ಎಂದರೆ ಪ್ರತಿಯೊಬ್ಬ ವಿದ್ಯಾರ್ಥಿಯು ಶಾಲೆಯ ತಪ್ಪಿಸಿಕೊಳ್ಳದೆ ವಿದ್ಯಾರ್ಜನೆಯನ್ನು ಪೂಜೆಯ ರೀತಿ ಭಾವಿಸಿ ಅಭ್ಯಾಸ ಮಾಡಬೇಕು ಎಂದರು.

ಸರ್ಕಾರವು ವಿದ್ಯಾಭ್ಯಾಸ ಗೋಸ್ಕರವೇ ಪ್ರತ್ಯಕ್ಯ ಸಚಿವಾಲಯ ಹೊಂದಿದ್ದು, ಬಹಳ ದೊಡ್ಡ ಮಟ್ಟದಲ್ಲಿ ಹಣವನ್ನು ವಿನಿಯೋಗಸುತ್ತದೆ, ಸರ್ಕಾರಿ ಶಾಲೆಯಲ್ಲಿ ಉನ್ನತ ಮಟ್ಟದ ಸೌಲಭ್ಯಗಳು ಇದ್ದು ಉನ್ನತ ಕಲಿತವರು ಶಿಕ್ಷಕರಾಗಿರುತ್ತಾರೆ ಜೊತೆಗೆ ಶಾಲಾ ಶುಲ್ಕ ವಿನಾಯಿತಿ ಇದ್ದು ಉಚಿತ ಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಊಟ, ಉಚಿತ ನೀಡುತ್ತಿರುವುದು ಶ್ಲಾಘನೀಯ, ಮಕ್ಕಳೆಲ್ಲರೂ ಈ ಸೌಲಭ್ಯಗಳನ್ನು ಬಳಸಿಕೊಳ್ಳುವುದು ಉತ್ತಮವಾಗಿರುತ್ತದೆ ಎಂದು ಅಭಿಪ್ರಾಯ ಪಟ್ಟರು.

ಇದೇ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕರಾದ  ಕೆ ರಘುರಾಮ್ ವಾಜಪೇಯಿ ,ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಅರಿವು ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ್ ಕಶ್ಯಪ್, ಎಸ್ ಎನ್ ರಾಜೇಶ್, ಸುಚಿಂದ್ರ, ಯದುನಂದನ್, ಆದರ್ಶ್, ನಾಳೆಯ ಮುಖ್ಯೋಪಾಧ್ಯಾಯರಾದ ಸುಗುಣ, ಶಿಕ್ಷಕರಾದ ಶಿವಯ್ಯ, ನಾಗರತ್ನ, ಶಿಲ್ಪ, ಸಿಬ್ಬಂದಿ ಮಮತಾ ಹಾಗೂ ಇನ್ನಿತರರು ಭಾಗವಹಿಸಿದ್ದರು.