ಮನೆ ಸುದ್ದಿ ಜಾಲ ಸೇತುವೆ ಹಾನಿ ವಿಚಾರ: ನಿರ್ಮಾಣ ಹಂತದಲ್ಲಿ ಇದೆಲ್ಲ ಸಹಜ ಎಂದ ಪ್ರತಾಪ್‌ ಸಿಂಹ

ಸೇತುವೆ ಹಾನಿ ವಿಚಾರ: ನಿರ್ಮಾಣ ಹಂತದಲ್ಲಿ ಇದೆಲ್ಲ ಸಹಜ ಎಂದ ಪ್ರತಾಪ್‌ ಸಿಂಹ

0

ಮೈಸೂರು (Mysuru)- ಕಳೆದ ಒಂದು ವಾರಗಳಿಂದ ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿ ನಡುವೆ ಸೇತುವೆ ಹಾನಿಯಾಗಿದೆ. ನಿರ್ಮಾಣ ಹಂತದಲ್ಲಿ ಇದೆಲ್ಲ ಸಹಜ ಎಂದು ಸಂಸದ ಪ್ರತಾಪ್‌ ಸಿಂಹ (Pratap Simha) ಹೇಳಿದ್ದಾರೆ.

ಸೇತುವೆ ಹಾನಿ ವಿಚಾರವಾಗಿ ರಸ್ತೆಯ ವಿಡಿಯೋ ಬಿಡುಗಡೆ ಮಾಡಿರುವ ಪ್ರತಾಪ್‌ ಸಿಂಹ ಅವರು, ಒಂದು ವಾರಗಳಿಂದಲೂ ಸತತ ಮಳೆಯಾಗುತ್ತಿರುವ ಹಿನ್ನೆಲೆ ಮಂಡ್ಯ ಬಳಿಯ ಇಂಡುವಾಳು ಬಳಿ ಸರ್ವಿಸ್ ರಸ್ತೆಯ ಸೇತುವೆ ಹಾನಿಯಾಗಿತ್ತು. ಈ ಹಿನ್ನೆಲೆ ಕೆಲಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಉದ್ಘಾಟನೆ ಬಳಿಕ ಮುಂದಿನ 15 ವರ್ಷಗಳವರೆಗೂ ರಸ್ತೆ ನಿರ್ವಹಣೆ ಗುತ್ತಿಗೆದಾರರದ್ದು. ಈ ಹಿನ್ನೆಲೆ ಅಪಪ್ರಚಾರಗಳಿಗೆ ಕಿವಿಗೊಡಬೇಡಿ. ನಿರ್ಮಾಣ ಹಂತದಲ್ಲಿ ಇವೆಲ್ಲವೂ ಸಹಜ ಎಂದು ಸ್ಪಷ್ಟಪಡಿಸಿದ್ದಾರೆ.