ಮನೆ ಸುದ್ದಿ ಜಾಲ ʻನಡೆದಾಡುವ ದೇವರೆಂದೇ ಖ್ಯಾತಿʼಗಳಿಸಿದ್ದ ಬಸವ ನಿಧನ  

ʻನಡೆದಾಡುವ ದೇವರೆಂದೇ ಖ್ಯಾತಿʼಗಳಿಸಿದ್ದ ಬಸವ ನಿಧನ  

0

ಮೈಸೂರು (Mysuru)- ಜಾತ್ರಾ-ಕೊಂಡೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದ ʻನಡೆದಾಡುವ ದೇವರೆಂದೇ ಖ್ಯಾತಿʼ ಪಡೆದಿದ್ದ ʼಬಸವʼ ನಿಧನ ಹೊಂದಿದ್ದಾನೆ.

ನಂಜನಗೂಡು ತಾಲ್ಲೂಕಿನ ರಾಜೂರುನಲ್ಲಿ ಬಸವನ ನಿಧನವಾಗಿದೆ. ಎರಡು ದಿನಗಳ ಹಿಂದೆಯೇಷ್ಟೇ ನಿಧನಗೊಂಡಿದ್ದ ಬಸವನ ವಿಧಿ ವಿಧಾನ ಕಾರ್ಯವನ್ನು ಗ್ರಾಮಸ್ಥರು ಸೋಮೇಶ್ವರ ದೇವಸ್ಥಾನದ ಮುಂಭಾಗ ನೆರವೇರಿಸಿದ್ದಾರೆ.

ಬೆಲದ ಕುಪ್ಪೆ ಶ್ರೀ ಮಲೈ ಮಹದೇಶ್ವರ ಜಾತ್ರೆಯ ಕೊಂಡೋತ್ಸವದಲ್ಲಿ ಭಾಗಿಯಾಗುತ್ತಿದ್ದ ಬಸವ 17 ವರ್ಷದಿಂದ ಗ್ರಾಮಸ್ಥರ ಅಚ್ಚುಮೆಚ್ಚಾಗಿದ್ದ. ಬಸವನನ್ನು ಕಳೆದುಕೊಂಡು ಗ್ರಾಮಸ್ಥರು ಕಣ್ಣೀರಾಕಿದ್ದಾರೆ.