ಮನೆ ಸ್ಥಳೀಯ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮೈಸೂರು ಜಿಲ್ಲಾ ಘಟಕದ ಚುನಾವಣೆ: ಹಿನಕಲ್ ಹೆಚ್.ವಿ. ಬಸವರಾಜು ಬಣಕ್ಕೆ...

ಭಾರತ ವೀರಶೈವ ಲಿಂಗಾಯತ ಮಹಾಸಭಾ ಮೈಸೂರು ಜಿಲ್ಲಾ ಘಟಕದ ಚುನಾವಣೆ: ಹಿನಕಲ್ ಹೆಚ್.ವಿ. ಬಸವರಾಜು ಬಣಕ್ಕೆ ಭರ್ಜರಿ ಜಯ

0

ಮೈಸೂರು: ಭಾರತ ವೀರಶೈವ ಲಿಂಗಾಯತ ಮಹಾಸಭಾ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಸ್ಥಾನಗಳಿಗೆ ಭಾನುವಾರ ನಗರದ ಅಗ್ರಹಾರದ ನಟರಾಜ ಸಭಾಭವನದಲ್ಲಿ ಚುನಾವಣೆ ನಡೆಯಿತು.

Join Our Whatsapp Group

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಿನಕಲ್ ಹೆಚ್.ವಿ. ಬಸವರಾಜು 729 ಮತಗಳಿಸುವುದರೊಂದಿಗೆ ಜಯಗಳಿಸಿದರು. ಇನ್ನಿತರ ಸ್ಪರ್ಧಿಗಳಾದ ವರುಣಾ ಮಹೇಶ್-634, ಶಿವಮೂರ್ತಿ ಕಾನ್ಯ-586, ವಸಂತಕುಮಾ‌ರ್ ಅವರು 56 ಮತಗಳನ್ನು ಪಡೆದರು.

30 ಮಂದಿ ನಿರ್ದೇಶಕರ ಸ್ಥಾನಗಳಿಗೆ ಹಿನಕಲ್ ಬಸವರಾಜುರವರ ತಂಡ ಭರ್ಜರಿ ಜಯಗಳಿಸಿತು. ಅವರ ತಂಡದಿಂದ ಪುರುಷ ನಿರ್ದೇಶಕ ಸ್ಥಾನದ 14 ಅಭ್ಯರ್ಥಿಗಳು ಹಾಗು ಮಹಿಳಾ ನಿರ್ದೇಶಕ ಸ್ಥಾನದ 8 ಅಭ್ಯರ್ಥಿಗಳು ಜಯಗಳಿಸಿದರು.

ಪುರುಷರಾದ ಪಿ.ಶೇಖರ್ ಎನ್.ಜಿ. ಗಿರೀಶ್, ಎಸ್. ಗಿರೀಶ್, ಕೆ. ಗೀರಿಕುಮಾರ್, ಎಲ್.ಪಿ. ಮಂಜುನಾಥ್, ದಕ್ಷಿಣಾಮೂರ್ತಿ, ಕೆ.ನಾಗರಾಜು, ಬಸವರಾಜು ಎಂ, ಕೆ.ಎಂ. ಮಾದಪ್ಪ, ಡಾ.ಎಂ.ಎಂ.ಮಹದೇವಪ್ಪ, ಎಂ.ಎಸ್. ರೇಚಣ್ಣ, ದೂರ ಕೆ. ಶಿವಕುಮಾರ್, ಷಡಕ್ಷರಿ ಗೆಲುವು ಸಾಧಿಸಿದರು.

ಮಹಿಳಾ ನಿರ್ದೇಶಕ ಸ್ಥಾನಕ್ಕೆ ಅನಸೂಯ ಗಣೇಶ್, ದಾಕ್ಷಾಯಿಣಿ ಲಿಂಗರಾಜು, ದಾಕ್ಷಾಯಿಣಿ ಎಂ. ಎನ್.ಬಿ. ಭಾಗ್ಯ, ರಾಜೇಶ್ವರಿ ಮಹೇಶ್, ರೂಪ ಸತೀಶ್, ಸರ್ವಮಂಗಳ ಹೆಚ್.ಎನ್., ಸೌಭಾಗ್ಯ ಒಟ್ಟು 22 ಮಂದಿ ಭರ್ಜರಿ ಜಯಗಳಿಸಿದರು.

ಶಿವಮೂರ್ತಿ ತಂಡದಲ್ಲಿ ಕಲಳ್ಳಿ ನಟರಾಜು, ಎ.ವಿ. ವಿರೂಪಾಕ್ಷ, ಜಿ.ಎಂ.ಮಹೇಶ್, ಎಂ.ಚಂದ್ರಶೇಖ‌ರ್, ಪರಮೇಶ್, ನಾಗಜ್ಯೋತಿ ಪ್ರತಿಧ್ವನಿ ಪ್ರಸಾದ್ 6 ಜನ ಜಯಗಳಿಸಿದರು. ವರುಣ ಮಹೇಶ್ ತಂಡದಿಂದ ನಟರಾಜು ಸಿ.ಆರ್., ಶೈಲಾ ನಾಗರಾಜು ಜಯಗಳಿಸಿದರು. ನೂತನ ಅಧ್ಯಕ್ಷ ಹಾಗೂ ನಿರ್ದೇಶಕರಿಗೆ ಮುಖಂಡರಾದ ಟಿ.ಎಸ್.ಲೋಕೇಶ್, ಎಂ.ಎಸ್.ಮಹದೇವಸ್ವಾಮಿ, ಇಮ್ಮಾವು ದಕ್ಷಿಣಮೂರ್ತಿ, ಟಿ.ಲಿಂಗರಾಜ ಅರ್ಜುನ, ದೇವಾಲಪುರ ನಾಗರಾಜು, ದೂರ ಮಹದೇವಸ್ವಾಮಿ, ಗೆಜ್ಜಗಳ್ಳಿ ಶಂಕರ್, ಖಂಡೇಶ್ ಕಾಶಿ, ವಿಶ್ವನಾಥ್ ಶೆಟ್ಟಿ, ದಾರಿಪುರ ಡಿ.ಚಂದ್ರಶೇಖರ್ ಇನ್ನಿತರರು ಶುಭಕೋರಿದರು.