ಮನೆ ಅಪರಾಧ ಬೆಂಗಳೂರು: ನೇಣು ಬಿಗಿದ ರೀತಿಯಲ್ಲಿ ಮಹಿಳೆಯ ಶವ ಪತ್ತೆ

ಬೆಂಗಳೂರು: ನೇಣು ಬಿಗಿದ ರೀತಿಯಲ್ಲಿ ಮಹಿಳೆಯ ಶವ ಪತ್ತೆ

0

ಬೆಂಗಳೂರು: ಎರಡು ವರ್ಷಗಳ ಹಿಂದಷ್ಟೇ ತರುಣ್ ಚೌಧರಿ ಎಂಬ ಯುವಕನನ್ನು ವಿವಾಹವಾಗಿದ್ದ ನಿಷಾ ಚೌಧರಿ ಎಂಬಾಕೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಬೆಂಗಳೂರಿನ ಆಡುಗೋಡಿಯಲ್ಲಿ ಪತ್ತೆಯಾಗಿದೆ.

Join Our Whatsapp Group

ಇದೀಗ ತನಿಷಾ ಪೋಷಕರು ಆಕೆಯ ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಅಂತಾ ಆರೋಪಿಸುತ್ತಿದ್ದಾರೆ.

ರಾಜಸ್ಥಾನದ ಮೂಲಕ ತರುಣ್ ಚೌಧರಿ ಬೆಂಗಳೂರಿನ ಆಡುಗೋಡಿಯಲ್ಲಿ ಚಿನ್ನದ ಅಂಗಡಿ ಇಟ್ಟುಕೊಂಡಿದ್ದರು. 2022ರಲ್ಲಿ ತರುಣ್ ಚೌಧರಿ ಜೊತೆ ರಾಜಸ್ಥಾನದ ಮೂಲದ ತನಿಷಾ ಮದುವೆ ಆಗಿತ್ತು. ತನಿಷಾ ಪೋಷಕರು ವರದಕ್ಷಿಣೆ, ಕಾರು ಕೊಟ್ಟು ಮದುವೆ ಮಾಡಿಕೊಟ್ಟಿದ್ದರು. ಹೀಗಿದ್ದರೂ ಪದೇಪದೆ ವರದಕ್ಷಿಣೆಗಾಗಿ ತರುಣ್ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಸೋಮವಾರ ತನಿಷಾ ಪೋಷಕರಿಗೆ ಕರೆ ಮಾಡಿದ್ದ ತರುಣ್, ನಿಮ್ಮ ಮಗಳು 50 ಮೆಟ್ಟಿಲಿನಿಂದ ಜಾರಿ ಬಿದ್ದಿದ್ದಾಳೆ ಬೇಗ ಬನ್ನಿ ಎಂದಿದ್ದ. ಸದ್ಯ ಹೈದರಾಬಾದ್​ ನಲ್ಲಿ ನೆಲೆಸಿರುವ ತನಿಷಾ ಕುಟುಂಬದವರು ಗಾಬರಿಯಲ್ಲಿ ಬೆಂಗಳೂರಿಗೆ ಬಂದಿದ್ದಾರೆ. ಇಲ್ಲಿಗೆ ಬಂದ್ಮೇಲೆ ತನಿಷಾ ಶವ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿತ್ತು ಎಂಬ ವಿಚಾರ ಗೊತ್ತಾಗಿದೆ. ಸದ್ಯ ತರುಣ್ ಸೇರಿದಂತೆ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.