ಮನೆ ಅಪರಾಧ ಅಕ್ರಮ ಪಡಿತರ ಅಕ್ಕಿ ಸಂಗ್ರಹ ಗೋದಾಮಿಗೆ ಎಸ್ಪಿ ಸಂಗೀತಾ ಜಿ. ದಾಳಿ: ಅಕ್ಕಿ ಜಪ್ತಿ

ಅಕ್ರಮ ಪಡಿತರ ಅಕ್ಕಿ ಸಂಗ್ರಹ ಗೋದಾಮಿಗೆ ಎಸ್ಪಿ ಸಂಗೀತಾ ಜಿ. ದಾಳಿ: ಅಕ್ಕಿ ಜಪ್ತಿ

0

ಯಾದಗಿರಿ: ಎಪಿಎಂಸಿ ಗೋದಾಮಿನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯೊಂದಿಗೆ ಶನಿವಾರ (ಆ.17) ಎಸ್ಪಿ ಸಂಗೀತಾ ಜಿ ಅವರು ದಾಳಿ ನಡೆಸಿದ್ದು, ಅಕ್ಕಿ ಜಪ್ತಿ ಮಾಡಿದ್ದಾರೆ.

Join Our Whatsapp Group

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಎ.ಪಿ.ಎಮ್.ಸಿ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 105 ಕೆಜಿ ಪಡಿತರ ಅಕ್ಕಿ ಚೀಲಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ

ಯಾದಗಿರಿ ಜಿಲ್ಲೆಯಲ್ಲಿ ಅಕ್ರಮ ಪಡಿತರ ಅಕ್ಕಿ ದಂಧೆಯು ಮೇಲಿಂದ ಮೇಲೆ ಕೇಳಿ ಬರುತ್ತಿದ್ದು, ಇದೀಗ ಗುರುಮಠಕಲ್ ಎಪಿ.ಎಮ್.ಸಿ ಗೋದಾಮಿನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹವಾಗಿದೆ.

ಯಾದಗಿರಿ ಎಸ್ಪಿ ಜಿ.ಸಂಗೀತಾ ಜಿ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಒಟ್ಟು 105 ಕೆಜಿ ಅನ್ನಭಾಗ್ಯ ಅಕ್ಕಿ ಜಪ್ತಿ ಮಾಡಲಾಗಿದೆ. ಖಚಿತ ಮಾಹಿತಿ ಮೇರೆಗೆ ಎಸ್ಪಿ ಸಂಗೀತಾ ಹಾಗೂ ಆಹಾರ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.

ತುಳಸಿರಾಮ್ ರಾಠೋಡ ಎಂಬ ವ್ಯಕ್ತಿ ಎಪಿಎಂಸಿ ಗೋದಾಮನ್ನು ಬಾಡಿಗೆ ಪಡೆದಿದ್ದರು. ಎಪಿಎಂಪಿ ಗೋದಾಮಿನಲ್ಲಿ ಪಡಿತರ ಅಕ್ಕಿ ಸಂಗ್ರಹ ಮಾಡಿಕೊಂಡಿದ್ದರು. 105 ಕೆ.ಜಿ ಪಡಿತರ ಅಕ್ಕಿ ಜಪ್ತಿ ಮಾಡಿದ ಗುರುಮಠಕಲ್ ಪೊಲೀಸರು ತುಳಸೀರಾಮ್ ರಾಠೋಡ್ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ.

ಆಹಾರ ಇಲಾಖೆಯ ನಿರೀಕ್ಷಕ ಸಾಬಣ್ಣ ಅವರಿಂದ ಗುರುಮಠಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.