ಮನೆ ರಾಷ್ಟ್ರೀಯ ನಾಯಿ ಜೊತೆ ವಾಕ್‌ ಗಾಗಿ ಕ್ರೀಡಾಂಗಣ ದುರ್ಬಳಕೆ: ದಂಪತಿಗಳ ವರ್ಗಾವಣೆ

ನಾಯಿ ಜೊತೆ ವಾಕ್‌ ಗಾಗಿ ಕ್ರೀಡಾಂಗಣ ದುರ್ಬಳಕೆ: ದಂಪತಿಗಳ ವರ್ಗಾವಣೆ

0

ನವದೆಹಲಿ(New Delhi): ತ್ಯಾಗರಾಜ್ ಕ್ರೀಡಾಂಗಣದಲ್ಲಿ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡ ಆರೋಪ ಹೊತ್ತಿರುವ ಐಎಎಸ್ ಅಧಿಕಾರಿಗಳಾದ ಸಂಜೀವ್ ಖಿರ್ವಾರ್ ಮತ್ತು ಪತ್ನಿ ರಿಂಕು ದುಗ್ಗಾ ಅವರನ್ನು ದೆಹಲಿಯಿಂದ ಲಡಾಕ್ ಹಾಗೂ ಅರುಣಾಚಲ ಪ್ರದೇಶಕ್ಕೆ ಕೇಂದ್ರ ಗೃಹ ಸಚಿವಾಲಯ ವರ್ಗಾವಣೆ ಮಾಡಿದೆ.

ಏನಿದು ಆರೋಪ ? : ಫ್ಲಡ್‌ಲೈಟ್ಸ್ ಮೂಲಕ ಕ್ರೀಡಾಪಟುಗಳಿಗೆ ರಾತ್ರಿ ವೇಳೆಯೂ ತರಬೇತಿ ನೀಡಲಾಗುತ್ತಿತ್ತು. ಆದರೆ ಈ ಅಧಿಕಾರಿಗಳು ತಮ್ಮ ನಾಯಿಯ ಜೊತೆ ಟರ್ಫ್ ಮೇಲೆ ವಾಕಿಂಗ್ ಮಾಡುವ ಸಲುವಾಗಿ ಕ್ರೀಡಾಪಟುಗಳನ್ನೇ ಮನೆಗೆ ಕಳುಹಿಸುತ್ತಿದ್ದರು. ಕಳೆದ ಕೆಲವು ತಿಂಗಳುಗಳಿಂದ ದೆಹಲಿ ಸರ್ಕಾರ ವತಿಯಿಂದ ತ್ಯಾಗರಾಜ ಸ್ಟೇಡಿಯಂನಲ್ಲಿ ಅಥ್ಲೀಟ್​ಗಳು ಹಾಗೂ ಕೋಚ್​ಗಳಿಗೆ ತರಬೇತಿ ನೀಡಲಾಗುತ್ತಿದೆ.

ಐಎಎಸ್‌ ಅಧಿಕಾರಿಗಳಾದ ಖಿರ್ವಾರ್ ಮತ್ತು ರಿಂಕು ದುಗ್ಗಾ ತ್ಯಾಗರಾಜ್ ಸ್ಟೇಡಿಯಂನಲ್ಲಿ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಕುರಿತು ಗೃಹ ಸಚಿವಾಲಯವು ದೆಹಲಿ ಮುಖ್ಯ ಕಾರ್ಯದರ್ಶಿಯಿಂದ ವರದಿ ಕೇಳಿತ್ತು. ಮುಖ್ಯ ಕಾರ್ಯದರ್ಶಿ ಅವರು ವಾಸ್ತವ ಸ್ಥಿತಿಯ ಕುರಿತು ಸಂಜೆ ಗೃಹ ಸಚಿವಾಲಯಕ್ಕೆ ವಿವರವಾದ ವರದಿ ಸಲ್ಲಿಸಿದ್ದರು. ಈ ವರದಿ ಆಧರಿಸಿ ನಿನ್ನೆಯೇ ಕೇಂದ್ರ ಕಠಿಣ ಕ್ರಮ ಕೈಗೊಂಡಿದೆ.