ಮನೆ ಅಪರಾಧ ಸಿಲಿಂಡರ್ ಬದಲಿಸುವಾಗ ಅಗ್ನಿ ಅವಘಡ; ಆಟೋ, ದ್ವಿಚಕ್ರ ವಾಹನ ಭಸ್ಮ

ಸಿಲಿಂಡರ್ ಬದಲಿಸುವಾಗ ಅಗ್ನಿ ಅವಘಡ; ಆಟೋ, ದ್ವಿಚಕ್ರ ವಾಹನ ಭಸ್ಮ

0

ಬೆಂಗಳೂರು: ಗ್ಯಾಸ್​​ ಸಿಲಿಂಡರ್​ಗೆ ಆಕಸ್ಮಿಕವಾಗಿ ಹತ್ತಿದ ಬೆಂಕಿಯಿಂದ ಒಂದು ಆಟೋ ಹಾಗೂ ಎರಡು ದ್ವಿಚಕ್ರ ವಾಹನಗಳು ಸುಟ್ಟು ಕರಕಲಾದ ಘಟನೆ ಕಳೆದ ರಾತ್ರಿ ವಿವೇಕ ನಗರ ಠಾಣಾ ವ್ಯಾಪ್ತಿಯ ಈಜಿಪುರದಲ್ಲಿ ನಡೆಯಿತು.

Join Our Whatsapp Group

ರಸ್ತೆ ಪಕ್ಕದಲ್ಲಿದ್ದ ಕಬಾಬ್​ ಅಂಗಡಿ ಮಾಲೀಕ ಸಿಲಿಂಡರ್​ ಬದಲಿಸುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಈ ವೇಳೆ ಗಾಬರಿಗೊಂಡು ಸಿಲಿಂಡರ್ ಅ​ನ್ನು ಪಕ್ಕಕ್ಕೆ ತಳ್ಳಿದ್ದಾರೆ. ಇದರ ಪರಿಣಾಮ ಅಲ್ಲಿಯೇ ನಿಂತಿದ್ದ ಆಟೋ ಹಾಗೂ ಎರಡು ದ್ವಿಚಕ್ರ ವಾಹನಗಳಿಗೂ ಬೆಂಕಿ ತಗುಲಿತು. ನೋಡುನೋಡುತ್ತಿದ್ದಂತೆ ವಾಹನಗಳೆರಡೂ ಸುಟ್ಟು ಕರಕಲಾದವು.

ಅಗ್ನಿಶಾಮಕ‌ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.