ಮನೆ ಅಪರಾಧ ಗುಂಡ್ಲುಪೇಟೆ: ಕಂದಕದ ಒಳಗೆ ಬಿದ್ದು ಗಂಡಾನೆ ಸಾವು

ಗುಂಡ್ಲುಪೇಟೆ: ಕಂದಕದ ಒಳಗೆ ಬಿದ್ದು ಗಂಡಾನೆ ಸಾವು

0

ಗುಂಡ್ಲುಪೇಟೆ (ಚಾಮರಾಜನಗರ): ಆನೆ ಟ್ರಂಚ್(ಕಂದಕ) ಒಳಗೆ ಬಿದ್ದು ಗಂಡಾನೆಯೊಂದು ಮೃತಪಟ್ಟಿರುವ ಘಟನೆ ತಾಲೂಕಿನ ಬಂಡೀಪುರ ಅಭಯಾರಣ್ಯದ ಓಂಕಾರ ವಲಯ ವ್ಯಾಪ್ತಿಯ ಹೊಸಪುರ ಗ್ರಾಮದ ಬಳಿ ಆ.3 ರಂದು ನಡೆದಿದೆ.

Join Our Whatsapp Group

ಸುಮಾರು 25-30 ವರ್ಷದ ಗಂಡಾನೆಯು ಹೊಸಪುರ ಕಾಡಂಚಿನಲ್ಲಿ ಅರಣ್ಯ ಇಲಾಖೆ ತೆಗೆಗಿದ್ದ ಕಂದಕ್ಕೆ ಬಿದ್ದು ಮೃತಪಟ್ಟಿದೆ. ರೈತರು ಜಮೀನುಗಳಿಗೆ ಹೋಗುವಾಗ ಆನೆ ಸಾವನ್ನಪ್ಪಿರುವುದು ತಿಳಿದು ಬಂದಿದ್ದು, ಬುಧವಾರ ತಡರಾತ್ರಿ ಅರಣ್ಯ ದಾಟುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.

ಆನೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ವೈದ್ಯರ ತಪಾಸಣೆ ಬಳಿಕ ಗೊತ್ತಾಗಲಿದೆ ಎಂದು ವಲಯ ಅರಣ್ಯಾಧಿಕಾರಿ ಸತೀಶ್ ಕುಮಾರ್ ತಿಳಿಸಿದರು.

ಸೋಲಾರ್ ತಂತಿ ಸ್ಪರ್ಶದಿಂದ ಆನೆ ಸಾವು-ಶಂಕೆ:  ಕಾಡಾನೆಯು ಅರಣ್ಯ ದಾಟುವ ವೇಳೆ ಕಂದಕ‌ದ ಬಳಿ ಅಳವಡಿಕೆ ಮಾಡಿದ್ದ ಸೋಲಾರ್ ತಂತಿಯಿಂದ ವಿದ್ಯುತ್ ಪ್ರವಹಿಸಿದ ಪರಿಣಾಮ ಟ್ರಂಚ್ ಒಳಗೆ ಬಿದ್ದು ಮೃತಪಟ್ಟಿರಬಹುದು ಎಂದು ಕೆಲ ರೈತ ಮುಖಂಡರು ಶಂಕೆ ವ್ಯಕ್ತಪಡಿಸಿದ್ದಾರೆ.