ಮನೆ ಅಪರಾಧ ಕಾವೇರಿ ನದಿಗೆ ಹಾರಿದ ಮೈಸೂರಿನ ವಿದ್ಯಾರ್ಥಿ

ಕಾವೇರಿ ನದಿಗೆ ಹಾರಿದ ಮೈಸೂರಿನ ವಿದ್ಯಾರ್ಥಿ

0

ಮಂಡ್ಯ(Mandya): ರಭಸದೊಂದಿಗೆ ಹರಿಯುತ್ತಿರುವ ಕಾವೇರಿ ನದಿಗೆ ಮೈಸೂರಿನ ವಿದ್ಯಾರ್ಥಿ ಧುಮುಕಿದ್ದು, ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ.

ಮೈಸೂರಿನ ಪಡುವಾರಹಳ್ಳಿಯ ಸೃಜನ್ (20) ನದಿಗೆ ಹಾರಿದ ವಿದ್ಯಾರ್ಥಿ.

ಈತ ತನ್ನ ಸ್ನೇಹಿತರೊಂದಿಗೆ ಕೆಆರ್​​ಎಸ್ ಜಲಾಶಯ ಮತ್ತು ಕಾವೇರಿ ನದಿ ನೋಡಲು ಬಂದಿದ್ದನಂತೆ. ಕೆಆ‌ರ್​​ಎಸ್ ಗೇಟ್‌ನಿಂದ ಸುಮಾರು 150 ಮೀ.ದೂರದಲ್ಲಿ ನಿಂತು ನೋಡುತ್ತಿದ್ದಾಗ ಏಕಾಏಕಿ ನದಿಗೆ ಧುಮುಕಿದ್ದಾನೆ. ಭೋರ್ಗರೆಯುತ್ತಿರುವ ನದಿಯ ಹರಿವಿನ ರಭಸಕ್ಕೆ ಯುವಕ ಕೊಚ್ಚಿಕೊಂಡು ಹೋಗಿದ್ದಾನೆ ಎನ್ನಲಾಗ್ತಿದೆ.ಸ್ನೇಹಿತರು ಆತನ ಮನೆಯವರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಸೃಜನ್‌ಗಾಗಿ ಶೋಧ ಕಾರ್ಯ ನಡೆಯಲಿದ್ದು, ಸುಳಿವು ಪತ್ತೆಯಾಗಿಲ್ಲ. ಕೆಆರ್​ಎಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಿಂದಿನ ಲೇಖನಸಿದ್ದರಾಮಯ್ಯ ಮಹಾನ್ ಸುಳ್ಳುಗಾರ: ವಿ.ಶ್ರೀನಿವಾಸ್ ಪ್ರಸಾದ್ 
ಮುಂದಿನ ಲೇಖನದೇಹದ ತೂಕ ಹೆಚ್ಚಿಸಿಕೊಂಡು ಫಿಟ್‌ ಆಗಿರಲು ಇಲ್ಲಿದೆ ಟಿಪ್ಸ್‌