ಪಂಜಾಬ್: ಗನ್ ಮ್ಯಾನ್’ಗಳು ಜೊತೆಯಲ್ಲಿದ್ದರು ಜವಳಿ ಉದ್ಯಮಿ ಟಿಮ್ಮಿ ಚಾವ್ಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಜಲಂಧರ್’ನಲ್ಲಿ ನಡೆದಿದೆ.
ಕಳೆದ ಕೆಲವು ದಿನಗಳ ಹಿಂದೆ ಜವಳಿ ಉದ್ಯಮಿಗೆ 20 ಲಕ್ಷ ಲಂಚದ ಹಣಕ್ಕೆ ಡಿಮ್ಯಾಂಡ್ ಮಾಡಿದ್ದು, ಹಣ ನೀಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ.
ಈ ಬೆದರಿಕೆ ಬಳಿಕ ಇಬ್ಬರು ಗನ್ ಮ್ಯಾನ್ಗಳನ್ನು ರಕ್ಷಣೆಗೆ ಉದ್ಯಮಿ ನೇಮಿಸಿಕೊಂಡಿದ್ದರು. ಈ ಗನ್ ಮ್ಯಾನ್’ಗಳು ಕೂಡ ಈ ದಾಳಿ ವೇಳೆ ಜೊತೆಯಲ್ಲಿಯೇ ಇದ್ದರು.
ಪ್ರಕರಣ ಕುರಿತು ಮಾತನಾಡಿರುವ ಪ್ರತ್ಯಕ್ಷದರ್ಶಿಯಾಗಿರುವ ಹರ್ಮಿಂದರ್ ಸಿಂಗ್ ಎಂಬುವರು, ನಾನು ಅವರ ಜೊತೆ ಯಾವಾಗಲೂ ಇರುತ್ತಿದ್ದೆ. ನಾನು ಶಾಪ್’ನ ಕೀಗಳನ್ನು ಹಾಕಿ ಕಾರಿನಲ್ಲಿ ಕುಳಿತುಕೊಳ್ಳಬೇಕು ಎನ್ನುವಷ್ಟರಲ್ಲಿ ಈ ರೀತಿ ದುರ್ಘಟನೆ ನಡೆದುಹೋಯಿತು. ಗ್ರಾಹಕರ ಸೋಗಿನಲ್ಲಿ ದುಷ್ಕರ್ಮಿಗಳು ಅಂಗಡಿಗೆ ಬಂದಿದ್ದಾರೆ ಎಂದರು.
ಘಟನೆ ಕುರಿತು ಮಾತನಾಡಿರುವ ಐಜಿಎಸ್ ಸಂದು, ಪ್ರಕರಣದ ತನಿಖೆ ಆರಂಭಿಸಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದರು.














