ರಾಮನಗರ: ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಶುಕ್ರವಾರ ಟಿಪ್ಪರ್ ಲಾರಿಯೊಂದು ಮೇಲ್ಸೇತುವೆ ಮೇಲೆ ಒರಗಿ ನಿಂತ ಘಟನೆ ತಾಲ್ಲೂಕಿನ ಸಂಗನಬಸವನ ದೊಡ್ಡಿ ಬಳಿ ಸಂಭವಿಸಿದೆ.
ಕಾರು ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿದ್ದು, ಎಂ ಸ್ಯಾಂಡ್ ತುಂಬಿದ್ದ ಲಾರಿಯು ಹೆದ್ದಾರಿ ಮೇಲ್ಸೇತುವೆ ಮೇಲೆ ಒರಗಿ ನಿಂತಿತು. ಇದರಿಂದಾಗಿ ಭಾರಿ ಅನಾಹುತ ತಪ್ಪಿದಂತಾಗಿದೆ.
ಸೇತುವೆ ಕೆಳಗೆ ಎಕ್ಸ್ ಪ್ರೆಸ್ ವೇನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿದ್ದು, ಲಾರಿ ಕೆಳಗೆ ಉರುಳಿ ಬಿದ್ದಿದ್ದರೆ ಅವಘಡ ಸಂಭವಿಸುವ ಸಾಧ್ಯತೆ ಇತ್ತು. ಘಟನೆಯಿಂದ ಯಾರಿಗೂ ಹೆಚ್ಚು ತೊಂದರೆ ಆಗಿಲ್ಲ.














