ಜಾರ್ಖಂಡ್: ಕಸದ ವಿಚಾರ ತಾರಕಕ್ಕೇರಿ ವ್ಯಕ್ತಿಯೊಬ್ಬ ಪಕ್ಕದ ಮನೆಯ ಮಹಿಳೆ ತಲೆ ಕತ್ತರಿಸಿರುವ ಘಟನೆ ಜಾರ್ಖಂಡ್ನ ಡುಮ್ಕಾದಲ್ಲಿ ನಡೆದಿದೆ. ಸಣ್ಣ ವಿಚಾರಕ್ಕೆ ಯುವಕನೊಬ್ಬ ಮಹಿಳೆಯ ಶಿರಚ್ಛೇದ ಮಾಡಿ, ಆಕೆಯ ಪತಿಯ ಮೇಲೂ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ, ಸ್ಥಿತಿ ಗಂಭೀರವಾಗಿದೆ. ಆರೋಪಿ ಫುಲ್ಚಂದ್ ಸಾಹ್ ಅಪರಾಧವನ್ನು ಒಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾನೆ.
ಕಬ್ರಿಸ್ತಾನ್ ರಸ್ತೆಯ ಬಳಿಯ ಕೆವತ್ಪಾರದಲ್ಲಿ ಸಂಜೆ 7 ಗಂಟೆ ಸುಮಾರಿಗೆ ಈ ಭಯಾನಕ ಘಟನೆ ನಡೆದಿದೆ. ಅಕ್ಕಪಕ್ಕದ ಮನೆಯವರಾದ ವಿಮಲಾ ದೇವಿ ಮತ್ತು ರಾಗ್ನಿ ಝಾ ನಡುವಿನ ದ್ವೇಷವು ಉಲ್ಬಣಗೊಂಡಿತ್ತು. ಪೊಲೀಸ್ ವರದಿಗಳ ಪ್ರಕಾರ, ಹೊಸದಾಗಿ ನಿರ್ಮಿಸಲಾದ ಪಿಸಿಸಿ ರಸ್ತೆಯಲ್ಲಿ ಕಸ ಎಸೆಯುವ ವಿಚಾರದಲ್ಲಿ ಇಬ್ಬರೂ ಆಗಾಗ ಜಗಳವಾಡುತ್ತಿದ್ದರು. ಬುಧವಾರ, ವಾಗ್ವಾದ ಭುಗಿಲೆದ್ದಿತು, ವಿಮಲಾ ಅವರ ಪತಿ, ಶಿಕ್ಷಕ ಮನೋಜ್ ಸಿಂಗ್ ಅವರು ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದಾಗ ಜಗಳ ತೀವ್ರವಾಗಿತ್ತು.
ಫುಲ್ಚಂದ್ ಸಾಹ್ ತನ್ನ ತಂದೆ ಲಾಲ್ಚಂದ್ ಸಾಹ್ ಮತ್ತು ಇಬ್ಬರು ಸಹೋದರರೊಂದಿಗೆ ಸ್ಥಳಕ್ಕೆ ಬಂದಾಗ ಪರಿಸ್ಥಿತಿ ಮತ್ತಷ್ಟು ಹೆದಗೆಟ್ಟಿತ್ತು, ಕೋಪದ ಭರದಲ್ಲಿ, ಫುಲ್ಚಂದ್ ಕತ್ತಿಯನ್ನು ಹೊರತೆಗೆದು ವಿಮಲಾ ದೇವಿಯ ಮೇಲೆ ಹಲ್ಲೆ ನಡೆಸಿ, ಒಂದೇ ಏಟಿನಿಂದ ಆಕೆಯ ತಲೆಯನ್ನು ಕತ್ತರಿಸಿ ಹಾಕಿದ್ದಾನೆ. ನಂತರ ಮನೋಜ್ ಸಿಂಗ್ ಮೇಲೆ ದಾಳಿ ಮಾಡಿ ತೀವ್ರ ಗಾಯಗಳನ್ನು ಮಾಡಿದ್ದಾನೆ.
ಮನೋಜ್ಗೆ ಆಳವಾದ ಗಾಯಗಳಾಗಿದ್ದು, ಹೆಚ್ಚಿನ ಪ್ರಮಾಣದ ರಕ್ತ ನಷ್ಟವಾಗಿದೆ. ಅವರನ್ನು ಫುಲೋ ಜಾನೋ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು, ಅಲ್ಲಿ ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ. ಫುಲ್ಚಂದ್ ಸ್ಥಳದಿಂದ ಪರಾರಿಯಾಗಿದ್ದನು ಆದರೆ ನಂತರ ಡುಮ್ಕಾದ ನಗರ ಠಾಣಾದಲ್ಲಿ ಶರಣಾದನು, ಅಲ್ಲಿ ಅವನನ್ನು ವಶಕ್ಕೆ ಪಡೆಯಲಾಯಿತು. ದಾಳಿಗೆ ಬಳಸಿದ ಕತ್ತಿಯನ್ನು ಪೊಲೀಸರು ವಶಪಡಿಸಿಕೊಂಡರು ಮತ್ತು ವಿಮಲಾ ದೇವಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ತನಿಖೆ ಮುಂದುವರೆದಿದ್ದು, ಕ್ರೂರ ಕೃತ್ಯದ ಬಗ್ಗೆ ತನಿಖೆ ನಡೆಯುತ್ತಿದೆ.
ಆಸ್ಪತ್ರೆಯಿಂದ ಮಾತನಾಡಿದ ಮನೋಜ್ ಸಿಂಗ್, ತಮ್ಮ ಪತ್ನಿ ಮತ್ತು ರಾಗ್ನಿ ಝಾ ನಡುವಿನ ಜಗಳದ ಬಗ್ಗೆ ಮಾತನಾಡಿದ್ದಾರೆ. ಫುಲ್ಚಂದ್ ಮತ್ತು ಅವರ ಕುಟುಂಬವು ಝಾ ಅವರನ್ನು ಬೆಂಬಲಿಸುತ್ತಿತ್ತು. ಘಟನೆಯನ್ನು ಪ್ರತ್ಯಕ್ಷದರ್ಶಿಯಾಗಿದ್ದ ವಿಮಲಾ ದೇವಿಯ ಮಗಳು, ಅಪಾಯದಿಂದ ತಪ್ಪಿಸಿಕೊಳ್ಳಲು ಮನೆಯೊಳಗೆ ಅಡಗಿಕೊಂಡಿದ್ದಾಗಿ ಹೇಳಿದ್ದಾರೆ.















