ಹಿಂದಿ ಕಿರುತೆರೆಯ ‘ಮಹಾಭಾರತ’ ಸೀರಿಯಲ್ನಲ್ಲಿ ಕರ್ಣನ ಪಾತ್ರ ನಿರ್ವಹಿಸಿ ಜನಪ್ರಿಯರಾಗಿದ್ದ, ನಟ ಪಂಕಜ್ ಧೀರ್ ಅವರು ನಿಧನರಾಗಿದ್ದಾರೆ.
ಪಂಕಜ್ ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಕಳೆದ ತಿಂಗಳುಗಳಿಂದ ಆಸ್ಪತ್ರೆಗಳಿಗೆ ಹೋಗಿ ಬರುತ್ತಿದ್ದರು. ಇತ್ತೀಚೆಗೆ ಕಾಯಿಲೆ ತೀವ್ರಗೊಂಡಿತ್ತು. ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಪಂಕಜ್ ಧೀರ್ ಅವರು ಚಂದ್ರಕಾಂತ, ಬಧೋ ಬಹು, ಜೀ ಹಾರರ್ ಶೋ, ಕಾನೂನ್, ಸಸುರಲ್ ಸಿಮಾರ್ ಕಾ, ಸೋಲ್ಜರ್, ಅಂದಾಜ್, ಬಾದ್ಶಾ, ಮತ್ತು ತುಮ್ಕೋ ನಾ ಭೂಲ್ ಪಾಯೆಂಗೆಯಂತಹ ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.














