ಮನೆ ರಾಷ್ಟ್ರೀಯ ಹಣಕಾಸು ಇಲಾಖೆಯ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ: ಜಮ್ಮು & ಕಾಶ್ಮೀರದ 6 ಜಿಲ್ಲೆಗಳಲ್ಲಿ ಸಿಬಿಐ ಶೋಧ

ಹಣಕಾಸು ಇಲಾಖೆಯ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ: ಜಮ್ಮು & ಕಾಶ್ಮೀರದ 6 ಜಿಲ್ಲೆಗಳಲ್ಲಿ ಸಿಬಿಐ ಶೋಧ

0

ನವದೆಹಲಿ: ಹಣಕಾಸು ಇಲಾಖೆಯ ಲೆಕ್ಕಪತ್ರ ಸಹಾಯಕ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರದ ಆರು ಜಿಲ್ಲೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಉಧಮ್‌’ಪುರ, ರಜೌರಿ ಹಾಗೂ ದೊಡ ಸೇರಿದಂತೆ 37 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಜಮ್ಮು ಮತ್ತು ಕಾಶ್ಮೀರ ಸೇವಾ ನೇಮಕಾತಿ ಮಂಡಳಿ (ಜೆಕೆಎಸ್‌’ಎಸ್‌’ಬಿ) ನಡೆಸಿದ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಕಳೆದ ವರ್ಷ (2022ರ) ನವೆಂಬರ್‌ನಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.

ಜೆಕೆಎಸ್‌’ಎಸ್‌’ಬಿ ಮಾಜಿ ಸದಸ್ಯ ನೀಲಂ ಖಜುರಿಯಾ, ನೇಮಕಾತಿ ಅಧಿಕಾರಿಗಳಾದ ಅಂಜು ರೈನಾ ಹಾಗೂ ಕರ್ನೆಲ್‌ ಸಿಂಗ್‌ ಸೇರಿದಂತೆ 20 ಮಂದಿ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದೆ.

ನೇಮಕಾತಿ ಪರೀಕ್ಷೆಯು 2022ರ ಮಾರ್ಚ್‌ 6ರಂದು ನಡೆದಿತ್ತು. ಅದೇ ವರ್ಷ ಏಪ್ರಿಲ್‌ 21ರಂದು ಫಲಿತಾಂಶ ಪ್ರಕಟವಾಗಿತ್ತು.

ಹಿಂದಿನ ಲೇಖನಕೆಲವು ಭಿನ್ನಾಭಿಪ್ರಾಯವನ್ನು ಅಸಮಾಧಾನ ಎಂದು ಅರ್ಥೈಸುವುದು ಸರಿಯಲ್ಲ: ಡಾ.ಜಿ.ಪರಮೇಶ್ವರ್.
ಮುಂದಿನ ಲೇಖನನಿಷ್ಕ್ರಿಯ ದಯಾಮರಣ: ಜೀವಂತ ಉಯಿಲಿಗೆ ಮ್ಯಾಜಿಸ್ಟ್ರೇಟ್ ಅನುಮತಿ ಅಗತ್ಯವಿಲ್ಲ ಎಂದ ಸುಪ್ರೀಂ ಕೋರ್ಟ್