ಮೈಸೂರು: ಮನೆ ಬಾಗಿಲು ಮೀಟಿ ಕಳವು ಮಾಡುತ್ತಿದ್ದವನನ್ನು ಬಂಧಿಸಿರುವ ಕುವೆಂಪುನಗರ ಠಾಣೆ ಪೊಲೀಸರು ಆತನಿಂದ 1.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಕಳ್ಳತನದ ಹಣದಲ್ಲಿ ಖರೀದಿಸಿದ ಟಾಟಾ ಗೂಡ್ಸ್ ವಾಹನವನ್ನೂ ವಶಪಡಿಸಿಕೊಂಡಿದ್ದಾರೆ.
ನಗರದ ಯರಗನಹಳ್ಳಿ ನಿವಾಸಿ ಕೃಷ್ಣಮೂರ್ತಿ (35) ಬಂಧಿತ ಆರೋಪಿ. ಈತ ಶ್ರೀರಾಂಪುರ ಬಡಾವಣೆ ಎಸ್.ಬಿ.ಎಂ. ಕಾಲೋನಿಯಲ್ಲಿರುವ ನಂಜುಂಡಸ್ವಾಮಿ ಎಂಬವರ ಮನೆ ಬಾಗಿಲು ಮೀಟಿ ನಗದು ಹಾಗೂ ಚಿನ್ನಾಭರಣ ದೋಚಿದ್ದ.
ಈತನ ಬಂಧನದಿಂದ ಕುವೆಂಪುನಗರ ಠಾಣೆಯ ಎರಡು ಕಳವು ಪ್ರಕರಣ ಹಾಗೂ ಮೇಟಗಳ್ಳಿ ಠಾಣೆಯ ಎರಡು ಕಳವು ಪ್ರಕರಣ ಪತ್ತೆಯಾಗಿದೆ.
ಕುವೆಂಪುನಗರ ಠಾಣೆ ನಿರೀಕ್ಷಕರಾದ ಅರುಣ್ ನೇತೃತ್ವದಲ್ಲಿ ಎಸ್ ಐಗಳಾದ ಗೋಪಾಲ್ ಹಾಗೂ ರಾಧಾ ಮತ್ತು ಸಿಬ್ಬಂದಿಗಳಾದ ಆನಂದ್, ಮಂಜುನಾಥ್, ಹಜರತ್ ಅಲಿ, ಪುಟ್ಟಪ್ಪ, ಸುರೇಶ್ ಹಾಗೂ ನಾಗೇಶ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.
ಕೆ ಸುಧಾಕರ್ ಗೆ ಗಂಡಾಂತರ.
ಕಾಂಗ್ರೆಸ್ ಕಾರ್ಯಕರ್ತರಿಗೆ ಐಟಿ ಕಿರುಕುಳ
ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ದ್ವಂಸ
ಏಪ್ರಿಲ್ 26ಕ್ಕೆ ಮೊದಲ ಹಂತದ ಚುನಾವಣೆ……
'ಕೈ' ಪರ ಪ್ರಚಾರದಲ್ಲಿದ್ದಾಗ ತಡೆದ ಬಿಜೆಪಿ ಕಾರ್ಯಕರ್ತರು….
ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ರಾಪಿಡೋ ವತಿಯಿಂದ ಸಿಹಿ ಸುದ್ದಿ
ಏಪ್ರಿಲ್ 26ಕ್ಕೆ ಏನೆಲ್ಲ ಲಭ್ಯವಿರುತ್ತದೆ….
ಲಂಡನ್ನಲ್ಲಿ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ.
ಲೋಕಸಭಾ ಚುನಾವಣೆಗೆ ಬೆಂಗಳೂರಿನಲ್ಲಿ ನಿಷೇಧಾಗ್ನೆ ಜಾರಿ..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.