ಮನೆ ರಾಜ್ಯ ಮನೆಗಳ್ಳನ ಬಂಧನ: ಚಿನ್ನಾಭರಣ ವಶ

ಮನೆಗಳ್ಳನ ಬಂಧನ: ಚಿನ್ನಾಭರಣ ವಶ

0

ಮೈಸೂರು: ಮನೆ ಬಾಗಿಲು ಮೀಟಿ ಕಳವು ಮಾಡುತ್ತಿದ್ದವನನ್ನು ಬಂಧಿಸಿರುವ ಕುವೆಂಪುನಗರ ಠಾಣೆ ಪೊಲೀಸರು ಆತನಿಂದ 1.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಕಳ್ಳತನದ ಹಣದಲ್ಲಿ ಖರೀದಿಸಿದ ಟಾಟಾ ಗೂಡ್ಸ್ ವಾಹನವನ್ನೂ ವಶಪಡಿಸಿಕೊಂಡಿದ್ದಾರೆ.

ನಗರದ ಯರಗನಹಳ್ಳಿ ನಿವಾಸಿ ಕೃಷ್ಣಮೂರ್ತಿ (35) ಬಂಧಿತ ಆರೋಪಿ. ಈತ ಶ್ರೀರಾಂಪುರ ಬಡಾವಣೆ ಎಸ್.ಬಿ.ಎಂ. ಕಾಲೋನಿಯಲ್ಲಿರುವ ನಂಜುಂಡಸ್ವಾಮಿ ಎಂಬವರ ಮನೆ ಬಾಗಿಲು ಮೀಟಿ ನಗದು ಹಾಗೂ ಚಿನ್ನಾಭರಣ ದೋಚಿದ್ದ.

ಈತನ ಬಂಧನದಿಂದ ಕುವೆಂಪುನಗರ ಠಾಣೆಯ ಎರಡು ಕಳವು ಪ್ರಕರಣ ಹಾಗೂ ಮೇಟಗಳ್ಳಿ ಠಾಣೆಯ ಎರಡು ಕಳವು ಪ್ರಕರಣ ಪತ್ತೆಯಾಗಿದೆ.

ಕುವೆಂಪುನಗರ ಠಾಣೆ ನಿರೀಕ್ಷಕರಾದ ಅರುಣ್ ನೇತೃತ್ವದಲ್ಲಿ ಎಸ್ ಐಗಳಾದ ಗೋಪಾಲ್ ಹಾಗೂ ರಾಧಾ ಮತ್ತು ಸಿಬ್ಬಂದಿಗಳಾದ ಆನಂದ್, ಮಂಜುನಾಥ್, ಹಜರತ್ ಅಲಿ, ಪುಟ್ಟಪ್ಪ, ಸುರೇಶ್ ಹಾಗೂ ನಾಗೇಶ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

ಹಿಂದಿನ ಲೇಖನಐವರು ಕಳ್ಳರ ಬಂಧನ: ಐದು ಬೈಕ್ ವಶ
ಮುಂದಿನ ಲೇಖನಪ್ರಚೋದನಕಾರಿ ಭಾಷಣ: ಕೆ.ಎಸ್.ಈಶ್ವರಪ್ಪ ವಿರುದ್ಧ ಸುಮೋಟೋ ಪ್ರಕರಣ ದಾಖಲು