ಮನೆ ಅಪರಾಧ ಅರಮನೆ ನಗರಿಯಲ್ಲಿ ಬೌಬೌ ಬಿರಿಯಾನಿ ದಂಧೆ: ರೆಸ್ಟೋರೆಂಟ್ ಗೆ ಬೀಗ ಜಡಿದ ಅಧಿಕಾರಿಗಳು

ಅರಮನೆ ನಗರಿಯಲ್ಲಿ ಬೌಬೌ ಬಿರಿಯಾನಿ ದಂಧೆ: ರೆಸ್ಟೋರೆಂಟ್ ಗೆ ಬೀಗ ಜಡಿದ ಅಧಿಕಾರಿಗಳು

0

ಮೈಸೂರು : ಅರಮನೆ ನಗರಿ ಮೈಸೂರಿನಲ್ಲಿ ಅಕ್ರಮವಾಗಿ ಬೌಬೌ ಬಿರಿಯಾನಿ ನಡೆಸುತ್ತಿರುವ ಕುರಿತು ವರದಿಯಾಗಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ.

Join Our Whatsapp Group

ಮೈಸೂರು ಜಿಲ್ಲೆಯ ಕೆ.ಆರ್ ನಗರದ ಪ್ರಭುಶಂಕರ ಬಿಲ್ಡಿಂಗ್ ನಲ್ಲಿದ್ದ ಗಣೇಶ್ ರೆಸ್ಟೋರೆಂಟ್ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ನಾಯಿ ಮಾಂಸದ ದಂಧೆ ಪತ್ತೆಯಾಗಿದೆ.

ದಾಳಿ ವೇಳೆ ರೆಸ್ಟೊರೆಂಟ್ ನಲ್ಲಿ ನಾಯಿ ಮಾಂಸ ಹಾಗೂ ಕೊಳೆತ ಕೋಳಿ ಮಾಂಸ ಕಂಡುಬಂದಿದ್ದು, ಮಾಂಸವನ್ನು ವಶಪಡಿಸಿಕೊಂಡ ಅಧಿಕಾರಿಗಳು, ರೆಸ್ಟೊರೆಂಟ್ ಗೆ ಬೀಗಮುದ್ರೆ ಜಡಿದಿದ್ದಾರೆ.

ಇನ್ನೂ ಪ್ರತಿಷ್ಠಿತ ಹೋಟೆಲ್‌ ಮೇಲೆ ದಾಳಿ ಮಾಡಿದ ಅಧಿಕಾರಿಗಳು, ಕೊಳೆತ ಮಾಂಸ, ಕಲ್ಲುಗಟ್ಟಿದ ಮೀನು, ಮಸಾಲೆ ಸಮೇತ ಬೂಸ್ಟ್‌ ಹಿಡಿದ ನಾನ್‌ ವೆಜ್‌ ನೋಡಿ ದಂಗಾಗಿದ್ದು, ಮಾಲೀಕರಿಗೆ ದಂಡ ವಿಧಿಸಿ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ.

ಈ ವೇಳೆ ತಹಸೀಲ್ದಾರ್‌ ಸಂತೋಷ್‌ ಕುಮಾರ್‌, ತಾಲೂಕು ಆರೋಗ್ಯಾಧಿಕಾರಿ ಡಾ. ಮಹೇಂದ್ರಪ್ಪ, ಪುರಸಭೆ ಆರೋಗ್ಯಾಧಿಕಾರಿಗಳು ಇದ್ದರು.

ಹಿಂದಿನ ಲೇಖನಶಾಲಾ ವಿದ್ಯಾರ್ಥಿಗಳ ಶೂ, ಸಾಕ್ಸ್ ಖರೀದಿಗೆ ಅನುದಾನ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ
ಮುಂದಿನ ಲೇಖನಫಾರಂ 3 ನೀಡಲು ಲಂಚ: ಲೋಕಾಯುಕ್ತ ಬಲೆಗೆ ಬಿದ್ದ ಹಗರಿಬೊಮ್ಮನಹಳ್ಳಿ ಪುರಸಭೆಯ ಸಿಬ್ಬಂದಿ