ಹೊಸದಿಲ್ಲಿ: ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಏರ್ಲಿಫ್ಟ್ ಮಾಡಬಹುದಾದ ಜಗತ್ತಿನ ಮೊದಲ ವಿಪತ್ತು ನಿರ್ವಹಣೆ ಆಸ್ಪತ್ರೆಯನ್ನು ಭಾರತ ಸಿದ್ಧಪಡಿಸಿದೆ. ಭೀಷ್ಮ್ (ಭಾರತ್ ಹೆಲ್ತ್ ಇನಿಷಿಯೇಟಿವ್ ಫಾರ್ ಸಹಯೋಗ್ ಹಿತ ಆಂಡ್ ಮೈತ್ರಿ) ಯೋಜನೆಯಡಿ ಆರೋಗ್ಯ ಮೈತ್ರಿ ಕ್ಯೂಬ್ ಅನ್ನೋ ಭಾರತ ಸಿದ್ಧಪಡಿಸಿದೆ.
ಇದರಲ್ಲಿ ಶಸ್ತ್ರಚಿಕಿತ್ಸಾ ಕೊಠಡಿ, ಸಣ್ಣ ಐಸಿಯು, ವೆಂಟಿಲೇಟರ್, ರಕ್ತ ಪರೀಕ್ಷ ಸಾಧನ, ಎಕ್ಸರೇ ಮಷೀನ್, ಅಡುಗೆಮನೆ ಸೌಲಭ್ಯ, ಆಹಾರ, ನೀರು, ವಸತಿ, ಪವರ್ ಜನರೇಟರ್ ಮತ್ತು ಇತರ ಸೌಲಭ್ಯಗಳು ಆರೋಗ್ಯ ಮೈತ್ರಿ ಕ್ಯೂಬ್ ನಲ್ಲಿ ಇರಲಿವೆ. ಇವುಗಳನ್ನು ಒಟ್ಟು 72 ಕ್ಯೂಬ್ ಗಳಲ್ಲಿ ಪ್ಯಾಕ್ ಮಾಡಿ, ತಲಾ 12 ಕ್ಯೂಬ್ ಗಳಂತೆ ಅವುಗಳನ್ನು ಮೂರು ಫ್ರೇಮ್ಗಳಲ್ಲಿ ಇಟ್ಟು ಬೇರೆಡೆ ಸಾಗಿಸಬಹುದಾಗಿದೆ.
200 ಮಂದಿಗೆ ಚಿಕಿತ್ಸೆ ಆರೋಗ್ಯ ಮೈತ್ರಿ ಕ್ಯೂಬ್ ನಲ್ಲಿ ಒಟ್ಟು 200 ಮಂದಿ ಗಾಯಾಳುಗಳಿಗೆ ನಿರಂತರ 48 ಗಂಟೆಗಳವರೆಗೆ ಚಿಕಿತ್ಸೆ ನೀಡಬಹುದಾಗಿದೆ. ಪ್ರಮುಖವಾಗಿ ಇದರಲ್ಲಿ ಬುಲೆಟ್ ನಿಂದ ಗಾಯಗಳಾದ 40 ಮಂದಿ, ತೀವ್ರ ಗಾಯಗಳಾದ 25 ಮಂದಿ, ತೀವ್ರ ಸುಟ್ಟ ಗಾಯಗಳಾದ ಇಪ್ಪತ್ತೈದು ಮಂದಿ, ತಲೆಗೆ ಪೆಟ್ಟಾದ 10 ಮಂದಿ, ಮೂಳೆಮುರಿತ, ಎದೆಗೆ ಗಾಯ, ಬೆನ್ನು ಮೂಳೆಯ ಗಾಯ ಮತ್ತು ಮುರಿತಕ್ಕೆ ಸಂಬಂಧಿಸಿದಂತೆ ಏಕಕಾಲದಲ್ಲಿ ಚಿಕಿತ್ಸೆ ನೀಡಬಹುದಾಗಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಭೀಷ್ಮ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದರು ಆನಂತರ ಇದಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯವು ಕಾರ್ಯಪಡೆಯನ್ನು ರಚಿಸಿತು ಟಿ 20 ಆರೋಗ್ಯ ಸಚಿವರ ಸಮಾವೇಶದ ನೇಪಥ್ಯದಲ್ಲಿ ಗುಜರಾತ್ ನ ಗಾಂಧಿನಗರದಲ್ಲಿ ಆಗಸ್ಟ್ ನಲ್ಲಿ ನಡೆದ ಮೆಡ್ ಟೆಕ್ ಎಕ್ಸ್ ಪೋದಲ್ಲಿ ಪ್ರಧಾನಿ ಮೋದಿ ಈ ಯೋಜನೆಗೆ ಚಾಲನೆ ನೀಡಿದ್ದರು.
ನೈಸರ್ಗಿಕ ವಿಕೋಪ ಅಥವಾ ಮಾನವ ಬಿಕ್ಕಟ್ಟಿನ ಸಂದರ್ಭದಲ್ಲಿ ಯಾವುದೇ ಅಭಿವೃದ್ಧಿಶೀಲ ದೇಶಕ್ಕೆ ಭಾರತವು ಅಗತ್ಯ ವೈದ್ಯಕೀಯ ಸರಬರಾಜು ಒದಗಿಸುವ ಆರೋಗ್ಯ ಮೈತ್ರಿ ಯೋಜನೆಯನ್ನು ಪ್ರಧಾನಿ ಮೋದಿ ಅವರು ಇದೇ ವರ್ಷದ ಜನವರಿಯಲ್ಲಿ ನಡೆದ ಜಾಗತಿಕ ದಕ್ಷಣ ಶೃಂಗಸಭೆಯಲ್ಲಿ ಘೋಷಿಸಿದರು. ಜುಲೈಯಲ್ಲಿ ಮೊದಲ ಬಾರಿ ಆರೋಗ್ಯ ಮೈತ್ರಿ ಕ್ಯೂಬ್ ಅನ್ನು ಮ್ಯಾನ್ಮಾರ್ ಅಧಿಕಾರಿಗಳಿಗೆ ಪ್ರದರ್ಶಿಸಲಾಯಿತು. ಈ ಕ್ಯೂಬ್ ಗಳನ್ನು ಮ್ಯಾನ್ಮಾರ್ ಗೆ ಭಾರತ ದೇಣಿಗೆ ನೀಡಿದೆ. ಇದೆ ವೇಳೆ ಶ್ರೀಲಂಕಕ್ಕೆ ಒಂದು ಕ್ಯೂಬ್ ನೀಡಲು ಸಿದ್ಧತೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಮಿನಿ ಉದ್ಯೋಗ ಮೇಳ..!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.