ಮನೆ ರಾಜ್ಯ ಬಿಜೆಪಿ ಜನಸ್ಪಂದನ: ಕಾರ್ಯಕ್ರಮದ ಸ್ಥಳದಲ್ಲಿ ಪ್ರತಿಭಟಿಸಲು ಯತ್ನಿಸಿದವರ ಬಂಧನ

ಬಿಜೆಪಿ ಜನಸ್ಪಂದನ: ಕಾರ್ಯಕ್ರಮದ ಸ್ಥಳದಲ್ಲಿ ಪ್ರತಿಭಟಿಸಲು ಯತ್ನಿಸಿದವರ ಬಂಧನ

0

ದೊಡ್ಡಬಳ್ಳಾಪುರ(Doddaballapura): ಬಿಜೆಪಿ ವತಿಯಿಂದ ಜನಸ್ಪಂದನ ಆಯೋಜಿಸಿರುವ ಸ್ಥಳದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ಜಿಲ್ಲಾ ಹೋರಾಟ ಸಮಿತಿ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲಾ ಕೇಂದ್ರವನ್ನಾಗಿ ದೊಡ್ಡಬಳ್ಳಾಪುರವನ್ನು ಘೋಷಣೆ ಮಾಡುವಂತೆ ಆಗ್ರಹಿಸಿ ಬೆಳಿಗ್ಗೆ 9 ಗಂಟೆಯಿಂದ ನಗರದ ಕನ್ನಡ ಜಾಗೃತ ಪರಿಷತ್ ಬಳಿ ಸಭೆ ಸೇರಿ ಜಾಥ ಮೂಲಕ ಜನಸ್ಪಂದನ ನಡೆಯುವ ಸ್ಥಳದ ಕಡೆಗೆ ಹೊರಟಿದ್ದವರನ್ನು ತಡೆಯಲಾಯಿತು.

ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು.