ಮನೆ ರಾಜ್ಯ ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ ಎಂಬಂತೆ ಬಿಜೆಪಿಯವರ ಸ್ಥಿತಿ: ಪ್ರಿಯಾಂಕ್ ಖರ್ಗೆ

ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ ಎಂಬಂತೆ ಬಿಜೆಪಿಯವರ ಸ್ಥಿತಿ: ಪ್ರಿಯಾಂಕ್ ಖರ್ಗೆ

0

ಕಲ್ಬುರ್ಗಿ(Kalburgi):  ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ ಎಂಬಂತೆ ಬಿಜೆಪಿಯವರ ಸ್ಥಿತಿ ಎಂದು ಮಾಜಿ ಸಚಿವ ಸಿ.ಟಿ ರವಿ ವಿರುದ್ಧ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ಧ ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಬಿಜೆಪಿಗೆ ವಿಷಯದ ಮೇಲೆ ಮಾತನಾಡಲು ಬರಲ್ಲ.  ಬಿಜೆಪಿಯವರು  ವೈಯಕ್ತಿಕ ಟೀಕೆ ಮಾಡುವುದನ್ನೇ ಹವ್ಯಾಸ ಮಾಡಿಕೊಂಡಿದ್ದಾರೆ.  ಇವರಿಗೆ ಅಂಕಿ ಅಂಶ ಕೋಡುವುದಕ್ಕೆ ಆಗೋದಲ್ಲ, ವೈಯಕ್ತಿಕ ಟೀಕೆ,  ಡಿಕೆ ಶಿ ಹಾಗೂ  ಸಿದ್ದರಾಮಯ್ಯ ಬಗ್ಗೆ ಟೀಕೆ ಮಾಡುವುದು ಹವ್ಯಾಸವಾಗಿಬಿಟ್ಟಿದೆ ಎಂದು ಹರಿಹಾಯ್ದರು.

ಬಿಜೆಪಿಯವರು ತುಂಬಾ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾರೆ.  ಸಂಸ್ಕೃತಿ ರಕ್ಷಕರು ಅಂತಾರೆ.  ಆದರೆ ಮಾತನಾಡೋದು ಹೀಗೆ  ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.

ಹಿಂದಿನ ಲೇಖನಇಂದಿನಿಂದ ಕರ್ನಾಟಕ ವಿಧಾನಮಂಡಲ ಅಧಿವೇಶನ: ಸದನ ಸಮರಕ್ಕೆ ಸಜ್ಜು
ಮುಂದಿನ ಲೇಖನನಂದಿನಿ ಹಾಲಿನ ದರದಲ್ಲಿ 3 ರೂ ಏರಿಕೆಗೆ ಕೆಎಂಎಫ್ ನಿರ್ಧಾರ