ಬೆಂಗಳೂರು(Bengaluru): ಅಂಧರ ಮೂರನೇ ಟಿ20 ವಿಶ್ವಕಪ್ ಟೂರ್ನಿಯು ಡಿಸೆಂಬರ್ ಆರರಿಂದ 17ರವರೆಗೆ ಭಾರತದಲ್ಲಿ ನಡೆಯಲಿದೆ ಎಂದು ಭಾರತ ಅಂಧರ ಕ್ರಿಕೆಟ್ ಸಂಸ್ಥೆಯು (ಸಿಎಬಿಐ) ಅಧ್ಯಕ್ಷ ಮಹಾಂತೇಶ್ ಜಿ.ಕೆ. ತಿಳಿಸಿದರು.
ಕೆಎಸ್ಸಿಎಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಟೂರ್ನಿ ಆಯೋಜನೆಯಾಗಲಿದ್ದು, ಆತಿಥೇಯ ಭಾರತ ಸೇರಿ ಏಳು ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ನೇಪಾಳ, ಬಾಂಗ್ಲಾದೇಶ, ಆಸ್ಟ್ರೇಲಿಯಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ಭಾಗವಹಿಸಲಿರುವ ಇನ್ನುಳಿದ ತಂಡಗಳಾಗಿವೆ ಎಂದರು.
ಡಿ.6ರಂದು ನಡೆಯುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡವು ನೇಪಾಳಕ್ಕೆ ಮುಖಾಮುಖಿಯಾಗಲಿದೆ. ಫರೀದಾಬಾದ್ನಲ್ಲಿ ಈ ಪಂದ್ಯ ನಡೆಯಲಿದೆ. ಒಟ್ಟು 24 ಪಂದ್ಯಗಳು ನಡೆಯಲಿದ್ದು, 17ರಂದು ಫೈನಲ್ ಪಂದ್ಯಕ್ಕೆ ಬೆಂಗಳೂರು ಆತಿಥ್ಯ ವಹಿಸಲಿದೆ.
ಯುವರಾಜ್ ಸಿಂಗ್ ರಾಯಭಾರಿ: ಈ ಬಾರಿಯ ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಪ್ರಚಾರ ರಾಯಭಾರಿಯಾಗಿದ್ದಾರೆ. 2017ರಲ್ಲಿ ನಡೆದಿದ್ದ ಟೂರ್ನಿಗೆ ರಾಹುಲ್ ದ್ರಾವಿಡ್ ರಾಯಭಾರಿಯಾಗಿದ್ದರು.
ಟೂರ್ನಿಗೆ ಪ್ರಕಟಿಸಲಾದ ಭಾರತ ತಂಡದಲ್ಲಿ ಕರ್ನಾಟಕದ ಪ್ರಕಾಶ್ ಜಯರಾಮಯ್ಯ, ಲೋಕೇಶ್ ಮತ್ತು ಸುನಿಲ್ ರಮೇಶ್ ಸ್ಥಾನ ಪಡೆದಿದ್ದಾರೆ.ಸಿಎಬಿಐ ಪ್ರಧಾನ ಕಾರ್ಯದರ್ಶಿ ಇ. ಜಾನ್ ಡೇವಿಡ್ ಮತ್ತು ಭಾರತ ತಂಡದ ನಾಯಕ ಅಜಯ್ಕುಮಾರ್ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಭಾರತ ತಂಡ ಇಂತಿದೆ: ಅಜಯ್ಕುಯಮಾರ್ ರೆಡ್ಡಿ (ನಾಯಕ), ವೆಂಕಟೇಶ್ವರ ರಾವ್ ದುನ್ನಾ (ಉಪನಾಯಕ), ಲಲಿತ್ ಮೀನಾ, ಪ್ರವೀಣ್ ಕುಮಾರ್ ಶರ್ಮಾ, ಸುಜೀತ್ ಮುಂಡಾ, ನೀಲೇಶ್ ಯಾದವ್, ಸೋನು ಗೋಲ್ಕರ್, ಸುವೇಂದು ಮೆಹತಾ, ನಕುಲ್ ಬಡಾನಾಯಕ್, ಇರ್ಫಾನ್ ದಿವಾನ್, ಲೋಕೇಶ್, ತೊಂಪಕಿ ದುರ್ಗಾ ರಾವ್, ಸುನಿಲ್ ರಮೇಶ್, ಎ.ರವಿ, ಪ್ರಕಾಶ್ ಜಯರಾಮಯ್ಯ, ದೀಪಕ್ ಮಲಿಕ್, ದಿನಕರ್ ಜಿ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಮಿನಿ ಉದ್ಯೋಗ ಮೇಳ..!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.