ಮನೆ ರಾಜ್ಯ ಚನ್ನಪಟ್ಟಣ ನೂತನ ಹೆಚ್ಚುವರಿ ಪಿಡಿಒಗಳ ನಿಯೋಜನೆ ಆದೇಶ ರದ್ದು

ಚನ್ನಪಟ್ಟಣ ನೂತನ ಹೆಚ್ಚುವರಿ ಪಿಡಿಒಗಳ ನಿಯೋಜನೆ ಆದೇಶ ರದ್ದು

0

ಬೆಂಗಳೂರು: ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ 20 ಜನ ಹೆಚ್ಚುವರಿ ಪಿಡಿಒಗಳನ್ನ ನಿಯೋಜನೆಗೊಳಿಸಿದ್ದ ಆದೇಶವನ್ನು ರದ್ದು ಮಾಡಲಾಗಿದೆ.

Join Our Whatsapp Group

ಸರ್ಕಾರದಿಂದ ಅನುಮೋದನೆ ಪಡೆಯದೆ ಜಿಲ್ಲಾಮಟ್ಟದಲ್ಲಿಯೇ ಪಿಡಿಒಗಳ ನಿಯೋಜನೆ ಹಿನ್ನೆಲೆಯಲ್ಲಿ ಹೆಚ್ಚುವರಿ ಪಿಡಿಒಗಳ ನಿಯೋಜನೆ ಆದೇಶವನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ.

ನಿಯೋಜನೆಗೂ ಮೊದಲು ಇಲಾಖೆ ಆಯುಕ್ತರಿಂದ ಅನುಮೋದನೆ ಕಡ್ಡಾಯ. ಆದರೆ ಅನುಮೋದನೆ ಪಡೆಯದೆ ತರಾತುರಿಯಲ್ಲಿ ಜಿಲ್ಲಾಮಟ್ಟದ ಸಿಇಒ ಹಂತದಲ್ಲಿಯೇ ನಿಯೋಜನೆ ಮಾಡಲಾಗಿದೆ, ಹೀಗಾಗಿ ಆದೇಶಕ್ಕೆ ತಡೆ ನೀಡಿ RDPR ಆಯುಕ್ತೆ ಅರುಂಧತಿ ಚಂದ್ರಶೇಖರ್ ಆದೇಶ ಹೊರಡಿಸಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಅವರು ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದಲ್ಲಿಯೇ ನೇಮಕ ಮಾಡಲಾಗಿತ್ತು. ಇದೀಗ 20 ಪಿಡಿಒಗಳ ನಿಯೋಜನೆ ಆದೇಶವನ್ನು ಸರ್ಕಾರ ರದ್ದುಗೊಳಿಸಿದೆ.