ಮನೆ ರಾಜ್ಯ ಹಸುಳೆ ಸಾವು ಪ್ರಕರಣ: ಶುಶ್ರೂಷಕ ಅಮಾನತು

ಹಸುಳೆ ಸಾವು ಪ್ರಕರಣ: ಶುಶ್ರೂಷಕ ಅಮಾನತು

0

ಮೈಸೂರು: ಸಕಾಲಕ್ಕೆ ಆಂಬುಲೆನ್ಸ್‌ ಸೇವೆ ಸಿಗದೇ ಹಸುಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಬುಲೆನ್ಸ್‌ ಶುಶ್ರೂಷಕ ಮಹೇಶ್‌ ಅವರನ್ನು ಅಮಾನತು ಮಾಡಲಾಗಿದೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್‌.ಪ್ರಸಾದ್‌ ಈ ಕುರಿತು ಮಾಹಿತಿ ನೀಡಿ, ಆಂಬುಲೆನ್ಸ್‌’ನಲ್ಲಿ ಆಮ್ಲಜನಕ ಲಭ್ಯವಿದ್ದರೂ ಅವರು ಸ್ಪಂದಿಸಿರಲಿಲ್ಲ. ಕರ್ತವ್ಯಲೋಪದ ಕುರಿತು ಆಂಬುಲೆನ್ಸ್ ಸೇವೆ ನೀಡುವ ಸಂಸ್ಥೆಗೆ ಮಾಹಿತಿ ನೀಡಿ ಅಮಾನತ್ತು ಮಾಡಲಾಗಿದೆ. ಹಾಲು ಕುಡಿಸುವಾಗ ವ್ಯತ್ಯಾಸವಾಗಿ ಶ್ವಾಸಕೋಶದ ಸಮಸ್ಯೆ ಏರ್ಪಟ್ಟು ಹಸುಳೆ ಮೃತಪಟ್ಟಿದೆ ಎಂದು ಪ್ರತಿಕ್ರಿಯಿಸಿದರು.

ಹಿಂದಿನ ಲೇಖನದೆಹಲಿ ಅಬಕಾರಿ ನೀತಿ ಹಗರಣ: ವೈಎಸ್’ಆರ್ ಕಾಂಗ್ರೆಸ್ ಸಂಸದರ ಪುತ್ರ ಇಡಿ ವಶಕ್ಕೆ
ಮುಂದಿನ ಲೇಖನಅಂತಾರಾಷ್ಟ್ರೀಯ ಮಾದಕವಸ್ತು ಜಾಲ ಭೇದಿಸಿ, ಸಣ್ಣಪುಟ್ಟ ದಂಧೆಕೋರರನ್ನಲ್ಲ: ತನಿಖಾ ಸಂಸ್ಥೆಗೆ ಸುಪ್ರೀಂ ಕಿವಿಮಾತು