ಮನೆ ರಾಜ್ಯ ಇಂದು ಮೈ-ಬೆಂ‌‌ ದಶಪಥ ಹೆದ್ದಾರಿ ಪರಿಶೀಲನೆ ನಡೆಸಲಿರುವ ಸಿಎಂ‌ ಸಿದ್ದರಾಮಯ್ಯ

ಇಂದು ಮೈ-ಬೆಂ‌‌ ದಶಪಥ ಹೆದ್ದಾರಿ ಪರಿಶೀಲನೆ ನಡೆಸಲಿರುವ ಸಿಎಂ‌ ಸಿದ್ದರಾಮಯ್ಯ

0

ಮಂಡ್ಯ: ಇಂದು ಸಕ್ಕರೆ ನಾಡು ಮಂಡ್ಯಕ್ಕೆ ಸಿಎಂ‌ ಸಿದ್ದರಾಮಯ್ಯ ಭೇಟಿ ನೀಡಲಿದ್ದು, ಮೈಸೂರು-ಬೆಂ‌ಗಳೂರು‌ ದಶಪಥ ಹೆದ್ದಾರಿ ಪರಿಶೀಲನೆ ನಡೆಸಲಿದ್ದಾರೆ.

Join Our Whatsapp Group

ಹೆದ್ದಾರಿ ಅವೈಜ್ಞಾನಿಕವಾಗಿದ್ದು, ಅಪಘಾತ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಈ ಕಾರಣದಿಂದಾಗಿ ದಶಪಥ ಹೆದ್ದಾರಿ ದೊಡ್ಡ ಸುದ್ದಿಯಲ್ಲಿದೆ. ಈ ಹಿನ್ನಲೆಯಲ್ಲಿ ಸಿಎಂ ವೀಕ್ಷಣೆ ಮಾಡಲಿದ್ದಾರೆ.

ಮಂಡ್ಯದ ಉಮ್ಮಡಹಳ್ಳಿ ಗೇಟ್ ಬಳಿ‌ ಬೆಳಿಗ್ಗೆ ಅಧಿಕಾರಿಗಳೊಂದಿಗೆ ಖುದ್ದು ಸಿಎಂ ಸಿದ್ದರಾಮಯ್ಯ ಹೆದ್ದಾರಿ ವೀಕ್ಷಿಸಲಿದ್ದಾರೆ.

ಇದೇ ವೇಳೆ ಮೈ-ಬೆಂ‌ ಹೆದ್ದಾರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅಳವಡಿಸಿರುವ ಹಾಕಿರುವ ಸ್ಪೀಡ್ ಬ್ರೇಕರ್(ಸ್ಪೀಡ್ ಡಿಟೆಕ್ಷನ್)ನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿದ್ದಾರೆ.

ಬಳಿಕ ದಶಪಥ ಹೆದ್ದಾರಿಯ ಗಣಂಗೂರು ಟೋಲ್ ಗೆ ಭೇಟಿ ನೀಡಿ, ಅಪಘಾತ ತಡೆಗಟ್ಟಲು ಏನೆಲ್ಲಾ ಕ್ರಮ‌ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳ ಜೊತೆ ಚರ್ಚೆ ಮಾಡಲಿದ್ದಾರೆ.

ಸಚಿವ ಚಲುವರಾಯಸ್ವಾಮಿ, ಶಾಸಕರು ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಿಎಂಗೆ ಸಾಥ್ ನೀಡಲಿದ್ದಾರೆ.

ಹಿಂದಿನ ಲೇಖನ450 ಅಡ್ಮಿನಿಸ್ಟ್ರೇಟಿವ್ ಆಫೀಸರ್ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ
ಮುಂದಿನ ಲೇಖನಕೆಆರ್ ಎಸ್ ಡ್ಯಾಂ ಭರ್ತಿಗೆ 12 ಅಡಿ ಬಾಕಿ