ಮನೆ ರಾಜ್ಯ ಪಠ್ಯ ಪುಸ್ತಕ ಕುರಿತು ಕಾಂಗ್ರೆಸ್ ಗೊಂದಲ ಮೂಡಿಸುತ್ತಿದೆ: ಸಚಿವ ಬಿ.ಸಿ ನಾಗೇಶ್

ಪಠ್ಯ ಪುಸ್ತಕ ಕುರಿತು ಕಾಂಗ್ರೆಸ್ ಗೊಂದಲ ಮೂಡಿಸುತ್ತಿದೆ: ಸಚಿವ ಬಿ.ಸಿ ನಾಗೇಶ್

0

ಕೊಪ್ಪಳ(Koppala): ಪಠ್ಯ ಪುಸ್ತಕ ಮತ್ತು ಹಿಜಾಬ್ ಕುರಿತು ಕಾಂಗ್ರೆಸ್ ಗೊಂದಲ ಮೂಡಿಸುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಆರೋಪಿಸಿದರು.

ಕೊಪ್ಪಳದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಬಿಸಿ ನಾಗೇಶ್,  ಈಗಾಗಲೇ ಶಾಲಾ ಪಠ್ಯಪುಸ್ತಕ ಮುದ್ರಣಗೊಂಡಿದೆ. ಪಠ್ಯ ಪುಸ್ತಕದಲ್ಲಿ ಇತಿಹಾಸ ರಾಷ್ಟ್ರೀಯತೆ ಇದೆ. ಆದರೆ  ಕಾಂಗ್ರೆಸ್ ಇಲ್ಲಸಲ್ಲದ ಆರೋಪಗಳನ್ನು ಮಾಡಿ  ಗೊಂದಲ ಮೂಡಿಸುತ್ತಿದೆ ಎಂದು ಕಿಡಿಕಾರಿದರು.

ಹಿಜಾಬ್ ವಿವಾದ ಕುರಿತು ಪ್ರತಿಕ್ರಿಯಿಸಿ, ಕೋರ್ಟ್ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಸಮವಸ್ತ್ರಕ್ಕೆ ಮಾತ್ರ ಅವಕಾಶವಿದೆ ಎಂದರು.

ಹಿಂದಿನ ಲೇಖನಹಿಟ್ ಅಂಡ್ ರನ್ ಪ್ರಕರಣ: ಇಬ್ಬರು ಸವಾರರು ಸ್ಥಳದಲ್ಲೇ ಸಾವು
ಮುಂದಿನ ಲೇಖನಮಳಲಿಯ ದೇವಸ್ಥಾನವನ್ನು ಕಾನೂನು ಮೂಲಕವೇ ಪಡೆಯುತ್ತೇವೆ: ಮುತಾಲಿಕ್​