ಮನೆ ರಾಜಕೀಯ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಗೆ ಕೇಸರಿ ಶಾಲಿನ ಮೂಲಕ ಸ್ವಾಗತ

ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಗೆ ಕೇಸರಿ ಶಾಲಿನ ಮೂಲಕ ಸ್ವಾಗತ

0

ಬೆಂಗಳೂರು(Bengaluru): ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ವಿಧಾನಸೌಧಕ್ಕೆ ಆಗಮಿಸಿದ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಅವರಿಗೆ ಬಿಜೆಪಿ ಶಾಸಕರು ಕೇಸರಿ ಶಾಲು ಹಾಕಿ ಸ್ವಾಗತಿಸಿದ ಘಟನೆ ಇಂದು ನಡೆಯಿತು.

ಸುರೇಶ್ ಅವರು ಮತಗಟ್ಟೆಯತ್ತ ತೆರಳುತ್ತಿದ್ದರು. ಆಗ ಮತದಾನ ಮಾಡಿ ವಾಪಸ್ ಬರುತ್ತಿದ್ದ ಬಿಜೆಪಿ ಶಾಸಕರಾದ ರಾಜೂಗೌಡ, ಗೂಳಿಹಟ್ಟಿ ಶೇಖರ್, ಎಂ.ಪಿ. ರೇಣುಕಾಚಾರ್ಯ ಮುಖಾಮುಖಿಯಾದರು.

ತಮ್ಮ ಹೆಗಲ‌ ಮೇಲಿದ್ದ ಕೇಸರಿ ಶಾಲನ್ನು ತೆಗೆದ ರಾಜೂಗೌಡ ಅವರು ಬೈರತಿ ಸುರೇಶ್ ಅವರ ಹೆಗಲಿಗೆ ಹಾಕಿದರು. ತಕ್ಷಣ ಅದನ್ನು ತೆಗೆದ ಸುರೇಶ್ ವಾಪಸ್ ನೀಡಿದರು.

ಹಿಂದಿನ ಲೇಖನಪತ್ರಕರ್ತರಿಗೆ ಬೂಸ್ಟರ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ
ಮುಂದಿನ ಲೇಖನರಾಷ್ಟ್ರಪತಿ ಅಭ್ಯರ್ಥಿ ವಿರುದ್ಧ ಟ್ವೀಟ್: ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು